ಕರ್ನಾಟಕ

karnataka

By

Published : Feb 5, 2021, 10:25 AM IST

ETV Bharat / bharat

ನಿವೃತ್ತ ಐಎಎಸ್ ಅಧಿಕಾರಿ ಎನ್‌ಜಿಒಗಳ ಮೇಲೆ ಬಾಲಪರಾಧಿಗಳ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲು

ದಕ್ಷಿಣ ದೆಹಲಿಯ ಉಮೀದ್ ಅಮನ್ ಘರ್ ಮತ್ತು ಖುಷಿ ರೇನ್ಬೋ ಹೋಂನಲ್ಲಿ ನಡೆದ ಉಲ್ಲಂಘನೆಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ರಿಜಿಸ್ಟ್ರಾರ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ..

A case has been registered under the Juvenile Justice Act
ನಿವೃತ್ತ ಐಎಎಸ್ ಅಧಿಕಾರಿ ಎನ್‌ಜಿಒಗಳ ಮೇಲೆ ಬಾಲಪರಾಧಿಗಳ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲು

ನವದೆಹಲಿ :ಕಾನೂನು ಉಲ್ಲಂಘನೆ ಆರೋಪದಡಿ ದಕ್ಷಿಣ ದೆಹಲಿಯಲ್ಲಿ ಎರಡು ಎನ್‌ಜಿಒಗಳ ಮೇಲೆ ಬಾಲಪರಾಧಿಗಳ ನ್ಯಾಯ (ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬಾಲಪರಾಧಿಗಳ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 83 (2)ರ ಅಡಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರಡಿ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಮಿಷನ್ ಪೂರ್ವೋದಯ ಶ್ಲಾಘಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ದಕ್ಷಿಣ ದೆಹಲಿಯ ಉಮೀದ್ ಅಮನ್ ಘರ್ ಮತ್ತು ಖುಷಿ ರೇನ್ಬೋ ಹೋಂನಲ್ಲಿ ನಡೆದ ಉಲ್ಲಂಘನೆಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ರಿಜಿಸ್ಟ್ರಾರ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಉಮೀದ್ ಅಮನ್ ಘರ್ ಮತ್ತು ಖುಷಿ ರೇನ್ಬೋ ಹೋಂ ಎರಡೂ ಸಂಸ್ಥೆಗಳನ್ನು ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (ಸಿಎಸ್‌ಇ) ಸ್ಥಾಪಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಹರ್ಷ್ ಮಾಂಡರ್ ಈ ಎನ್​ಜಿಒಗಳನ್ನು ನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details