ಕರ್ನಾಟಕ

karnataka

ಜಲಪಾತದ ಬಳಿ ಫೋಟೊಶೂಟ್; ಮೂವರು ಯುವಕರು ದಾರುಣ ಸಾವು

ನಿನ್ನೆ ಮಧ್ಯಾಹ್ನ ಹತ್ತು ಯುವಕರು ಗುಡ್ಡಿಗುಮ್ಮಿ ಜಲಪಾತಕ್ಕೆ ಹೋಗಿದ್ದಾರೆ. ಈ ವೇಳೆ ಫೋಟೋ ತೆಗೆಯುವಾಗ ಒಬ್ಬ ಜಲಪಾತಕ್ಕೆ ಜಾರಿದ್ದಾನೆ . ಅವನನ್ನು ಉಳಿಸಲು ಮತ್ತಿಬ್ಬರು ಮುಂದಾಗಿ ಅವರೂ ಕೂಡ ಕೊಚ್ಚಿಹೋಗಿದ್ದಾರೆ.

By

Published : May 31, 2021, 6:02 PM IST

Published : May 31, 2021, 6:02 PM IST

three people falls in to water fall and died
three people falls in to water fall and died

ವಿಶಾಖಪಟ್ಟಣ: ಜಿಲ್ಲೆಯ ತಿಗಲವಲಸ ಗ್ರಾಮದ ಬಳಿಯ ಗುಡ್ಡಿಗುಮ್ಮಿ ಜಲಾಶಯದಲ್ಲಿ ಬಿದ್ದು ಮೂವರು ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.

ನಿನ್ನೆ ಮಧ್ಯಾಹ್ನ ಹತ್ತು ಯುವಕರು ಗುಡ್ಡಿಗುಮ್ಮಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಫೋಟೋ ತೆಗೆಯುವಾಗ ಒಬ್ಬ ಕಾಲುಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಅವನನ್ನು ಉಳಿಸಲು ಮತ್ತಿಬ್ಬರು ಮುಂದಾಗಿ ಅವರೂ ಕೂಡ ಕೊಚ್ಚಿಹೋಗಿದ್ದಾರೆ. ನೀರು ಪಾಲಾದ ಈ ಮೂವರ ಶವಗಳನ್ನು ಹೊರತೆಗೆಯಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಬೆಳಗ್ಗೆ ಎರಡು ಶವಗಳು ಪತ್ತೆಯಾಗಿದ್ದು, ಕೆಲ ಸಮಯದ ನಂತರ ಮತ್ತೊಂದು ಶವವನ್ನು ಪತ್ತೆಹಚ್ಚಿ ಹೊರತರಲಾಗಿದೆ

ABOUT THE AUTHOR

...view details