ಕರ್ನಾಟಕ

karnataka

ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರಿಗೆ ಬಡಿದ ಸಿಡಿಲು.. ಓರ್ವ ಸಾವು, ಮೂವರಿಗೆ ಗಾಯ! ವಿಡಿಯೋ

ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರ ಮೇಲೆ ಸಿಡಿಲು ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿರುವ ಘಟನೆ ಉತ್ತರಪ್ರದೇಶ ಗುರುಗ್ರಾಮ್​ನಲ್ಲಿ ನಡೆದಿದೆ.

By

Published : Mar 16, 2021, 11:23 AM IST

Published : Mar 16, 2021, 11:23 AM IST

three people burnt, three people burnt and one died, three people burnt and one died due to lightning, gurugram lightning, gurugram lightning news, ಮೂವರಿಗೆ ಸುಟ್ಟ ಗಾಯ, ಸಿಡಿಲಿಗೆ ಮೂವರಿಗೆ ಸುಟ್ಟ ಗಾಯ ಮತ್ತು ಓರ್ವ ಸಾವು, ಗುರುಗ್ರಾಮ್​ನಲ್ಲಿ ಸಿಡಿಲಿಗೆ ಮೂವರಿಗೆ ಸುಟ್ಟ ಗಾಯ ಮತ್ತು ಓರ್ವ ಸಾವು, ಗುರುಗ್ರಾಮ್​ ಸಿಡಿಲು ಸುದ್ದಿ,
ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರ ಮೇಲೆ ಬಿದ್ದ ಸಿಡಿಲು

ಗುರುಗ್ರಾಮ್​: ಸಾವೆಂಬುದು ಯಾವ ರೂಪದಲ್ಲಿ, ಯಾವ ಸಮಯದಲ್ಲಿ, ಯಾವ ರೀತಿ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಅಂತಹದೊಂದು ಘಟನೆ ಗುರುಗ್ರಾಮ್​ದಲ್ಲಿ ನಡೆದಿದೆ.

ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರ ಮೇಲೆ ಬಿದ್ದ ಸಿಡಿಲು

ಇಲ್ಲಿನ ಸೆಕ್ಟರ್ 82 ರಲ್ಲಿ ಸಿಡಿಲಿನ ಹೊಡೆತಕ್ಕೆ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಸುಟ್ಟ ಗಾಯಗಳಾಗಿವೆ. ಗುರುಗ್ರಾಮ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

ತೋಟಗಾರಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮಳೆ ಬಂದ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದಿದ್ದರು. ಇವರು ಆಶ್ರಯ ಪಡೆಯುತ್ತಿದ್ದ ಮರಕ್ಕೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಸಂಪೂರ್ಣ ಘಟನೆ ಮಾರ್ಚ್​ 12 ಶುಕ್ರವಾರದಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್​ ಎನ್ನುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ABOUT THE AUTHOR

...view details