ಖೋವಾಯಿ (ತ್ರಿಪುರ): ಹಸುಗಳನ್ನು ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಮೂವರು ಯುವಕರನ್ನು ಜನರು ಹಿಗ್ಗಾಮುಗ್ಗಾ ಥಳಿಸಿ ಕೊಂದಿರುವ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯ ಎಡಿಸಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜಹೇದ್ ಹೊಸೈನ್ (28), ಬಿಲ್ಲಾಲ್ ಮಿಯಾ (30) ಮತ್ತು ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಗ್ಗೆ ಎಡಿಸಿ ಗ್ರಾಮದ ಸಮೀಪ ಮೂವರು ಅಪರಿಚಿತ ಯುವಕರು ಅನುಮಾನಾಸ್ಪದವಾಗಿ ಟ್ರಕ್ ಓಡಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ಅಡ್ಡಗಟ್ಟಿದ್ದಾರೆ. ಟ್ರಕ್ನಲ್ಲಿ ಐದು ಹಸುಗಳಿರುವುದನ್ನು ನೋಡಿದ ಜನರು ಯುವಕರನ್ನು ಮನಬಂದಂತೆ ಥಳಿಸಿದ್ದಾರೆ.