ಕರ್ನಾಟಕ

karnataka

By

Published : Apr 10, 2022, 11:46 AM IST

ETV Bharat / bharat

ನಡುರಸ್ತೆಯಲ್ಲೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಮಗ!

ಕೌಟುಂಬಿಕ ಕಲಹದಿಂದಾಗಿ ಯುವಕನೋರ್ವ ತನ್ನ ತಂದೆ-ತಾಯಿಯನ್ನು ರಸ್ತೆಯಲ್ಲೇ ಕೊಂದಿರುವ ಘಟನೆ ಕೇರಳದ ತ್ರಿಶೂರ್​ನಲ್ಲಿ ನಡೆದಿದೆ.

Son hacks parents in the middle of the road in Kerala
ನಡುರಸ್ತೆಯಲ್ಲೇ ತಂದೆ-ತಾಯಿಯನ್ನು ಕೊಂದ ಮಗ

ತ್ರಿಶೂರ್(ಕೇರಳ): ಯುವಕನೋರ್ವ ತನ್ನ ತಂದೆ-ತಾಯಿಯನ್ನು ನಡು ರಸ್ತೆಯಲ್ಲೇ ಕೊಂದಿರುವ ಘಟನೆ ಕೇರಳದ ತ್ರಿಶೂರ್​ನಲ್ಲಿ ನಡೆದಿದೆ. ಮೃತರನ್ನು ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಎಂದು ಗುರುತಿಸಲಾಗಿದೆ. ಆರೋಪಿ ಅನೀಶ್ (30) ತಲೆಮರೆಸಿಕೊಂಡಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಟ್ಟನ್ ಹಾಗೂ ಚಂದ್ರಿಕಾ ರಸ್ತೆಯಲ್ಲಿ ಮನೆಯ ಮುಂದಿನ ಹುಲ್ಲು ಕಟಾವು ಮಾಡುತ್ತಿದ್ದಾಗ ಅನೀಶ್ ಚಾಕು ಹಿಡಿದು ಬಂದು, ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ತಂದೆ ತಾಯಿಯನ್ನು ಕೊಂದಿರುವುದಾಗಿ ತಿಳಿಸಿ, ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಹೊನ್ನಾಳಿಯಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಂದೆಯನ್ನೇ ಕೊಂದ ಮಗ

ABOUT THE AUTHOR

...view details