ಕರ್ನಾಟಕ

karnataka

ಐಆರ್​ಎಸ್​ ಅಧಿಕಾರಿ ಸುಳಿವು ನೀಡಿದವರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ಸಿಬಿಐ

ಆರೋಪಿ ಅಧಿಕಾರಿಯು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿತ್ತು.

By

Published : Dec 2, 2022, 1:23 PM IST

Published : Dec 2, 2022, 1:23 PM IST

Updated : Dec 2, 2022, 1:39 PM IST

ಐಆರ್​ಎಸ್​ ಅಧಿಕಾರಿ ಸುಳಿವು ನೀಡಿದವರಿಗೆ 1 ಲಕ್ಷ ರೂ ನಗದು ಬಹುಮಾನ; ಸಿಬಿಐ ಘೋಷಣೆ
rs-1-lakh-cash-reward-for-irs-official-tip-off-cbi-announcement

ನವ ದೆಹಲಿ: ತಲೆಮರೆಸಿಕೊಂಡಿರುವ ಭಾರತೀಯ ಕಂದಾಯ ಸೇವೆ (ಐಆರ್​ಎಸ್)​ ಅಧಿಕಾರಿಯ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಕೇಂದ್ರ ತನಿಖಾ ದಳ(ಸಿಬಿಐ) ಘೋಷಿಸಿದೆ.

ಅಹಮದಾಬಾದ್​ನ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕರ್ಣನಿ ಎಂಬ ಅಧಿಕಾರಿಗೆ ಹುಡುಕಾಟ ನಡೆಸಲಾಗುತ್ತಿದೆ. 30 ಲಕ್ಷ ರೂ ಲಂಚ ಪಡೆದ ಪ್ರಕರಣದಲ್ಲಿ ಸಿಬಿಐ ಇವರ ಮೇಲೆ ದಾಳಿ ನಡೆಸಿದೆ. ಅಧಿಕಾರಿಯ ವಿರುದ್ಧ ಅರೆಸ್ಟ್​ ವಾರೆಂಟ್​ ಕೂಡ ಜಾರಿ ಮಾಡಲಾಗಿದೆ. ಆರೋಪಿಯ ಮನೆ ಸೇರಿದಂತೆ ಸಂಬಂಧಿಕರ ನಿಸವಾಸಗಳ ಮೇಲೆ ನ.19 ಮತ್ತು 21ರಂದು ದಾಳಿ ನಡೆದಿತ್ತು. ಈ ವೇಳೆ ಪ್ರಮುಖ ದಾಖಲೆಗಳೂ ಸೇರಿದಂತೆ 41,96,743 ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಅಧಿಕಾರಿ ತಲೆಮರೆಸಿಕೊಂಡಿದ್ದಾರೆ.

ಅಧಿಕಾರಿಯ ಕುರಿತು ಸಾರ್ವಜನಿಕರು ಯಾವುದೇ ಸುಳಿವು ನೀಡದರೂ ಅವರಿಗೆ 1 ಲಕ್ಷ ನಗದು ಬಹುಮಾನ ನೀಡುವುದಾಗಿ ಸಿಬಿಐ ಘೋಷಿಸಿದೆ. ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.

ಇದನ್ನೂ ಓದಿ: ಲೋಕಾಯುಕ್ತರಿಂದ ಭ್ರಷ್ಟರ ಬೇಟೆ: ಬಲೆಗೆ ಬಿದ್ದ ವಿಜಯಪುರ ಎಪಿಎಂಸಿ ಅಧಿಕಾರಿ

Last Updated : Dec 2, 2022, 1:39 PM IST

ABOUT THE AUTHOR

...view details