ನವದೆಹಲಿ: ಈ ಬಾರಿಯ ಮುಂಗಾರು ಸಂಸತ್ ಅಧಿವೇಶನ ಪೆಗಾಸಸ್ ಸ್ಪೈವೇರ್ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಎಬ್ಬಿಸಿದ ಗದ್ದಲ ಹಾಗೂ ಪ್ರತಿಭಟನೆಗೆ ಬಲಿಯಾಗಿದೆ.
ಪೆಗಾಸಸ್ ವಿವಾದಕ್ಕೆ ಸಂಸತ್ ಕಲಾಪ ಬಲಿ ; ಸ್ಪೀಕರ್ ಭೇಟಿ ಮಾಡಿದ ಸರ್ವಪಕ್ಷಗಳ ನಾಯಕರು
ಇಂದೂ ಕೂಡ ಪೆಗಾಸಸ್ಗೆ ಸಂಬಂಧಿಸಿದಂತೆ ಲೋಕಸಭೆ ಕಲಾಪದಲ್ಲಿ ಗದ್ದಲ ಉಂಟಾಗಿದ್ದರಿಂದ ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆ ಪಿಎಂ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದಾರೆ..
ಇಂದೂ ಕೂಡ ಪೆಗಾಸಸ್ಗೆ ಸಂಬಂಧಿಸಿದಂತೆ ಲೋಕಸಭೆ ಕಲಾಪದಲ್ಲಿ ಗದ್ದಲ ಉಂಟಾಗಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಸೇರಿ ಟಿಎಂಸಿ, ಅಕಾಲಿದಳ, ವೈಎಸ್ಆರ್ಸಿಪಿ, ಬಿಜೆಡಿ ಸಂಸದರು ಇಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಂಬರುವ ಕಲಾಪದಲ್ಲಿ ಸತ್ವಯುತ ಚರ್ಚೆ ನಡೆಯುವ ಬಗ್ಗೆ ಎಲ್ಲ ನಾಯಕರು ಸ್ಪೀಕರ್ ಜತೆ ಸಮಾಲೋಚನೆ ನಡೆಸಿದರು.