ಕರ್ನಾಟಕ

karnataka

ETV Bharat / bharat

ಪೆಗಾಸಸ್​​ ವಿವಾದಕ್ಕೆ ಸಂಸತ್​ ಕಲಾಪ ಬಲಿ ; ಸ್ಪೀಕರ್​ ಭೇಟಿ ಮಾಡಿದ ಸರ್ವಪಕ್ಷಗಳ ನಾಯಕರು

ಇಂದೂ ಕೂಡ ಪೆಗಾಸಸ್​​ಗೆ ಸಂಬಂಧಿಸಿದಂತೆ ಲೋಕಸಭೆ ಕಲಾಪದಲ್ಲಿ ಗದ್ದಲ ಉಂಟಾಗಿದ್ದರಿಂದ ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆ ಪಿಎಂ ಮೋದಿ, ಅಮಿತ್​ ಶಾ, ಸೋನಿಯಾ ಗಾಂಧಿ ಸ್ಪೀಕರ್​ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದಾರೆ..

By

Published : Aug 11, 2021, 4:08 PM IST

Updated : Aug 11, 2021, 4:19 PM IST

speaker
ಸ್ಪೀಕರ್​ ಭೇಟಿ

ನವದೆಹಲಿ: ಈ ಬಾರಿಯ ಮುಂಗಾರು ಸಂಸತ್​ ಅಧಿವೇಶನ ಪೆಗಾಸಸ್​ ಸ್ಪೈವೇರ್​ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಎಬ್ಬಿಸಿದ ಗದ್ದಲ ಹಾಗೂ ಪ್ರತಿಭಟನೆಗೆ ಬಲಿಯಾಗಿದೆ.

ಇಂದೂ ಕೂಡ ಪೆಗಾಸಸ್​​ಗೆ ಸಂಬಂಧಿಸಿದಂತೆ ಲೋಕಸಭೆ ಕಲಾಪದಲ್ಲಿ ಗದ್ದಲ ಉಂಟಾಗಿದ್ದರಿಂದ ಸ್ಪೀಕರ್​ ಓಂ ಬಿರ್ಲಾ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ, ಕಾಂಗ್ರೆಸ್​​ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ ಸೇರಿ ಟಿಎಂಸಿ, ಅಕಾಲಿದಳ, ವೈಎಸ್​ಆರ್​​ಸಿಪಿ, ಬಿಜೆಡಿ ಸಂಸದರು ಇಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮುಂಬರುವ ಕಲಾಪದಲ್ಲಿ ಸತ್ವಯುತ ಚರ್ಚೆ ನಡೆಯುವ ಬಗ್ಗೆ ಎಲ್ಲ ನಾಯಕರು ಸ್ಪೀಕರ್​ ಜತೆ ಸಮಾಲೋಚನೆ ನಡೆಸಿದರು.

Last Updated : Aug 11, 2021, 4:19 PM IST

ABOUT THE AUTHOR

...view details