ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ನವೆಂಬರ್ 3ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ಗುಂಡಿನ ದಾಳಿಗೆ ಒಳಗಾಗಿದ್ದ ನೇಪಾಳದ ವಲಸಿಗ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ನೇಪಾಳದ ಗಮನ್ ಸಿಂಗ್ ಅವರ ಮಗ ಸಿತ್ ಬಹ್ದೂರ್ ತಾಪ (42) ಎಂದು ಗುರುತಿಸಲಾಗಿದೆ.
ಅನಂತನಾಗ್ನಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ನೇಪಾಳದ ವಲಸಿಗ ಕಾರ್ಮಿಕ ಸಾವು
ನ. 3ರಂದು ಅನಂತನಾಗ್ನ ವನಿಹಮ ಬೊಂಡೈಲಗಾಮಯದಲ್ಲಿ ತಾಪ ಸೇರಿದಂತೆ ಇಬ್ಬರು ವಲಸಿಗರು ಉಗ್ರರ ದಾಳಿಗೆ ಗಾಯಗೊಂಡಿದ್ದರು.
Nepali migrant laborer who was attacked by terrorists in Anantnag died
ಅನಂತನಾಗ್ನ ವನಿಹಮ ಬೊಂಡೈಲಗಾಮಯದಲ್ಲಿ ತಾಪ ಸೇರಿದಂತೆ ಇಬ್ಬರು ವಲಸಿಗರು ಉಗ್ರರ ದಾಳಿಗೆ ಸಿಲುಕಿ ಗಾಯಗೊಂಡಿದ್ದರು. ಅವರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತಾಪನನ್ನು ಇಲ್ಲಿನ ಎಸ್ಕೆಐಎಂಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: 2,000 ರೂಪಾಯಿ ಹಣಕ್ಕಾಗಿ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ