ನವದೆಹಲಿ: ಅಂತಿಮವಾಗಿ ಭಾರತವನ್ನು ಎರಡು-ಅಂಕಿಯ ಬೆಳವಣಿಗೆಯ ಹಾದಿಯಲ್ಲಿ ಇರಿಸಿದ 2021ರ ಬಜೆಟ್ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.
ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಂಡವಾಳ ಆಸ್ತಿ ಸೃಷ್ಟಿಗೆ ಹೆಚ್ಚಿನ ಹಂಚಿಕೆ ಮಾಡಲಾಗಿದೆ. 21ನೇ ಶತಮಾನಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಸ್ಥಾಪನೆಗೆ ಭರವಸೆ ನೀಡಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಮೋದಿ ಸರ್ಕಾರ ನಿರ್ಮಿಸಿದೆ. ಯುಪಿಎಗೆ ಹೋಲಿಸಿದರೆ ವಿದ್ಯುದೀಕರಣದಲ್ಲಿ ಶೇ 371ರಷ್ಟು ಹೆಚ್ಚಳವಾಗಿದೆ. ಭವಿಷ್ಯದ ದೃಷ್ಟಿಕೋನ ಇರಿಸಿಕೊಂಡು ಆಯವ್ಯಯ ಮಂಡಿಸಿದ ಹಣಕಾಸು ಸಚಿವರಿಗೆ ಧನ್ಯವಾದಗಳು ಎಂದು ಹೇಳಿದರು.
ರಕ್ಷಣಾ ಅನುದಾನದಲ್ಲಿ ಶೇ 19ರಷ್ಟು ಹೆಚ್ಚಳ ಆಗುವುದರೊಂದಿಗೆ ಬಜೆಟ್ ದೇಶಕ್ಕೆ ನೆರವಾಗಲಿದೆ. ವಿನ್ಯಾಸದ ಮೂಲಕ ದೇಶದ ಬೆಳವಣಿಗೆಯನ್ನು ಇಲ್ಲಿಯವರೆಗೆ ತಡೆಹಿಡಿಯಲಾಗಿತ್ತು. ಇನ್ನು ಮುಂದೆ ಅಂತಹ ಅಡೆತಡೆಗಳು ಇರುವುದಿಲ್ಲ. ಭಾರತದ ರಾಜಕೀಯ ಆರ್ಥಿಕತೆಯನ್ನು ಪರಿವರ್ತಿಸಲು ಪ್ರಧಾನಿಯ ನೀತಿಗಳು ಪ್ರಯತ್ನಿಸುತ್ತಿವೆ. ಈ ಬಜೆಟ್ ಹೂಡಿಕೆ ಮಾಡುವುದನ್ನು ಒಪ್ಪುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಖಾಸಗಿ ಹೂಡಿಕೆ ಉತ್ತೇಜಿಸುತ್ತದೆ ಎಂದರು.