ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಮಾವೋವಾದಿಗಳ ಚಲನವಲನ : ಟೀ ಗಾರ್ಡನ್ ಪ್ರದೇಶಗಳೇ ಗುರಿ

ಮಾವೋವಾದಿಗಳು ಅಸ್ಸೋಂನಲ್ಲಿ ರಹಸ್ಯವಾಗಿ ಕಳ್ಳಸಾಗಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ಮಾವೋವಾದಿ ಗುಂಪಿನೊಂದಿಗೆ ಅನುಮಾನಾಸ್ಪದವಾಗಿ ಕಂಡುಬಂದ ಪತಿ ಮತ್ತು ಪತ್ನಿಯರಾದ ಸೋನಾಖಿರಾ ಪ್ರದೇಶದ ರಾಜು ಒರಾಂಗ್ ಮತ್ತು ಅವರ ಪತ್ನಿ ಪಿಂಕಿ ಒರಾಂಗ್ ಅವರನ್ನು ಎನ್‌ಐಎ ಬಂಧಿಸಿದೆ..

By

Published : Apr 4, 2022, 6:44 PM IST

ಅಸ್ಸೋಂನಲ್ಲಿ ಮಾವೋವಾದಿಗಳ ಚಲನವಲನ
ಅಸ್ಸೋಂನಲ್ಲಿ ಮಾವೋವಾದಿಗಳ ಚಲನವಲನ

ಅಸ್ಸೋಂ: ಮಾವೋವಾದಿಗಳು ಅಸ್ಸೋಂನಲ್ಲಿ ರಹಸ್ಯವಾಗಿ ನೆಲೆಯೂರಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಮಾವೋವಾದಿ ನಾಯಕ ಅರುಣ್ ಕುಮಾರ್ ಭಟ್ಟಾಚಾರ್ಯ ಅಲಿಯಾಸ್ ಕಾಂಚನ್ ದಾ ಅವರನ್ನು ಆಕಾಶ್ ಒರಾಂಗ್ ಅಲಿಯಾಸ್ ರಾಹುಲ್ ಪಾಟಿಮಾರಾ ಜೊತೆ ಕ್ಯಾಚಾರ್ ಜಿಲ್ಲೆಯ ಚಹಾ ತೋಟದಲ್ಲಿ ಬಂಧಿಸಲಾಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಮಾವೋವಾದಿಗಳು ಅಸ್ಸೋಂನಲ್ಲಿ ರಹಸ್ಯವಾಗಿ ಕಳ್ಳಸಾಗಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ಮಾವೋವಾದಿ ಗುಂಪಿನೊಂದಿಗೆ ಅನುಮಾನಾಸ್ಪದವಾಗಿ ಕಂಡುಬಂದ ಪತಿ ಮತ್ತು ಪತ್ನಿಯರಾದ ಸೋನಾಖಿರಾ ಪ್ರದೇಶದ ರಾಜು ಒರಾಂಗ್ ಮತ್ತು ಅವರ ಪತ್ನಿ ಪಿಂಕಿ ಒರಾಂಗ್ ಅವರನ್ನು ಎನ್‌ಐಎ ಬಂಧಿಸಿದೆ.

ದಂಪತಿಯನ್ನು ಬಂಧಿಸಿದ ನಂತರ ಪೊಲೀಸರು ದಿಬ್ರುಗಢ ಜಿಲ್ಲೆಯಲ್ಲಿ ಮಾವೋವಾದಿ ಸದಸ್ಯನನ್ನು ಸಹ ಬಂಧಿಸಿದ್ದಾರೆ. ಎನ್ಐಎಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ದಿಬ್ರುಗಢ ಪೊಲೀಸರು ನಹರ್ಕಟಿಯಾದ ಸಾಸ್ನಿಯಲ್ಲಿ ಸರಸ್ವತಿ ಓರಾಂಗ್ ಎಂಬ ಮಾವೋವಾದಿ ಸದಸ್ಯನನ್ನು ಬಂಧಿಸಿದ್ದಾರೆ. ಹಾಗೆ ನಹರ್ಕಟಿಯಾ ಮತ್ತು ಜೈಪುರ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಸಸಾನಿಯ ಶಮುಕ್ತುಲಾ ಗ್ರಾಮದ ಸದಸ್ಯನೋರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ತನ್ನ ಎಲ್ಲಾ ಆಸ್ತಿಯನ್ನು ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಮಹಿಳೆ: ಕಾರಣ ಇಷ್ಟೇ..!

ಮಾವೋವಾದಿಗಳು ವಿಶೇಷವಾಗಿ ಚಹಾ ತೋಟದ ಪ್ರದೇಶಗಳಲ್ಲಿ ಜಾಲಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಪರಿಣಾಮ ಈಗ ಕಾಂಚನ್​ದಾದಿಂದ ಹಿಡಿದು ಸರಸ್ವತಿಯನ್ನು ಬಂಧಿಸಲಾಗಿದೆ. ಪರಿಣಾಮ ರಾಜ್ಯದಲ್ಲಿ ಮಾವೋವಾದಿ ನಾಯಕರು ಮತ್ತು ಸದಸ್ಯರ ಬಂಧನ ಪೊಲೀಸ್ ಆಡಳಿತಕ್ಕೆ ಸವಾಲಾಗಿದೆ. ರಾಜ್ಯದ ಕೆಲವೆಡೆ ಮಾವೋವಾದದ ರಹಸ್ಯ ಚಲನವಲನ ನಡೆಯುತ್ತಿರುವುದು ಈಗಾಗಲೇ ದೃಢಪಟ್ಟಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಮಾವೋವಾದಿಗಳು ಚಹಾ ತೋಟದ ಪ್ರದೇಶಗಳಲ್ಲಿ ಅಡಗಿದ್ದಾರೆ.

ABOUT THE AUTHOR

...view details