ನವದೆಹಲಿ: ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಭೋಗಿ, ಬಿಹು, ಉತ್ತರಾಯಣ್ ಮತ್ತು ಪೌಶ್ ಪರ್ವಗಳ ಆಚರಣೆಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಸಮಾಜದಲ್ಲಿ ಸಾಮರಸ್ಯ, ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ಹಾರೈಸಿದ್ದಾರೆ.
ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಭೋಗಿ, ಬಿಹು, ಉತ್ತರಾಯಣ್ ಮತ್ತು ಪೌಶ್ ಪರ್ವಗಳ ಶುಭಾಶಯಗಳು. ಈ ಹಬ್ಬಗಳು ನಮ್ಮ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ಬಂಧವನ್ನು ಬಲಪಡಿಸಲಿ ಮತ್ತು ದೇಶದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ಹೆಚ್ಚಿಸಲಿ, ಎಂದು ಭಾರತದ ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.
ಎಲ್ಲರಿಗೂ ಲೋಹ್ರಿ ಮತ್ತು ಭೋಗಿಯ ಶುಭಾಶಯಗಳು. ಈ ಹಬ್ಬಗಳು ಉತ್ತಮ ಸುಗ್ಗಿ ಮತ್ತು ಪ್ರಕೃತಿಯ ಸಮೃದ್ಧಿಯನ್ನು ಸಂಕೇತಿಸುತ್ತವೆ. ಧಾರ್ಮಿಕ ಆಚರಣೆ ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ, ಎಂದು ಅವರು ಟ್ವೀಟ್ನಲ್ಲಿ ಮತ್ತಷ್ಟು ಬರೆದುಕೊಂಡಿದ್ದಾರೆ.
ಭೋಗಿ ಬದಲಾವಣೆಯ ಹಬ್ಬ. ನಕಾರಾತ್ಮಕ ವಿಚಾರಗಳನ್ನು ತಿರಸ್ಕರಿಸಿ, ಹೊಸ ಶಕ್ತಿಯನ್ನು ಜನರ ಮನೆಗಳಲ್ಲಿ ಸ್ವಾಗತಿಸಲಾಗುತ್ತದೆ. ದೀಪ(ಬೆಂಕಿ) ಹಚ್ಚುವಿಕೆ ಅಥವಾ ಭೋಗಿ ಮಂಟಲು ಬೆಳಗಿಸುವ ಮೂಲಕ ಇದನ್ನು ಸಾಂಕೇತಿಸಲಾಗುತ್ತದೆ "ಎಂದು ಉಪಾಧ್ಯಕ್ಷರು ತಮ್ಮ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.