ಉತ್ತರಾಖಂಡ್: ಕರ್ನಾಟಕದ ಎಡಿಜಿಪಿ ಅರುಣ್ ಚಕ್ರವರ್ತಿ.ಜೆ ನೇತೃತ್ವದಲ್ಲಿ ಪೊಲೀಸ್ ಪ್ರಾಸಿಕ್ಯೂಷನ್ ತಂಡ ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಭೇಟಿ ಮಾಡಿದರು.
ಇದಕ್ಕೂ ಮೊದಲು ಪೊಲೀಸ್ ತರಬೇತಿ ಸಭಾಂಗಣದಲ್ಲಿ ಮೇಲ್ಕಂಡ ತಂಡದೊಂದಿಗೆ, ಎಸ್ಸಿ/ಎಸ್ಟಿ ಕಿರುಕುಳಕ್ಕೆ ಸಂಬಂಧಿಸಿದ ದೂರು, ಎಫ್ಐಆರ್ ನೋಂದಣಿ, ಪೊಲೀಸ್ ತನಿಖೆ, ತನಿಖೆಯ ಮೇಲ್ವಿಚಾರಣೆ, ನ್ಯಾಯಾಲಯದಲ್ಲಿ ವಿಚಾರಣೆ, ಪ್ರಾಸಿಕ್ಯೂಷನ್ ಪಾತ್ರ, ಸಂತ್ರಸ್ತರಿಗೆ ಆರ್ಥಿಕ ನೆರವು, ಭದ್ರತೆ, ಪುನರ್ವಸತಿ, ಸಮಾಜ ಕಲ್ಯಾಣ ಇಲಾಖೆ ಇತ್ಯಾದಿ ಪಾತ್ರಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.