ಕತಿಹಾರ್:ಬಿಹಾರದ ಕತಿಹಾರ್ನಲ್ಲಿ ಸ್ಥಳೀಯ ಜೆಡಿಯು ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುರುವಾರ ಸಂಜೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಜಿಲ್ಲೆಯ ಬರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬರಾರಿ ಬಜಾರ್ನಲ್ಲಿ ಜೆಡಿಯು ಮುಖಂಡ ಕೈಲಾಶ್ ಮಹತೋ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಕಳೆದ ದಿನ ಜೆಡಿಯು ಮುಖಂಡ ಕೈಲಾಶ್ ಮಹತೋ ಮೇಲೆ ದುಷ್ಕರ್ಮಿಗಳು ನಾಲ್ಕೈದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಜೆಡಿಯು ಮುಖಂಡ ಕೈಲಾಶ್ ಮಹತೋ ಅವರು ಗುಂಡು ತಗುಲಿದ ಕೂಡಲೇ ಸ್ಥಳದಲ್ಲೇ ಕುಸಿದು ಬಿದ್ದರು. ಇನ್ನು ಮಾರ್ಕೆಟ್ನಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಾಡ ತೊಡಗಿದರು.
ಇನ್ನು ಗುಂಡೇಟಿನಿಂದ ಕುಸಿದು ಬಿದ್ದಿದ್ದ ಜೆಡಿಯು ಮುಖಂಡ ಕೈಲಾಶ್ ಮಹತೋ ಅವರನ್ನು ಸುತ್ತಮುತ್ತಲಿನವರು ಎತ್ತಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾ ಜೆಡಿಯು ಪ್ರಧಾನ ಕಾರ್ಯದರ್ಶಿ ಕೈಲಾಶ್ ಮಹತೋ ಅವರು ಕಳೆದ ಹಲವು ದಿನಗಳಿಂದ ಅಪರಾಧಿಗಳ ಹಿಟ್ ಲಿಸ್ಟ್ನಲ್ಲಿ ಸೇರಿದ್ದರು. ಈ ವಿಷಯ ಅವರಿಗೆ ತಿಳಿದಿತ್ತು. ಹೀಗಾಗಿ ಮಹತೋ ತಮಗೆ ರಕ್ಷಣಗೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ಬರಾರಿ ಬಜಾರ್ನಲ್ಲಿ ಜೆಡಿಯು ಮುಖಂಡ ಕೈಲಾಶ್ ಮಹತೋ ಅವರನ್ನು ಗುಂಡಿಕ್ಕಿ ಕೊಂದ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಗುಂಡು ತಗುಲಿದ ನಂತರ ಸ್ಥಳೀಯರು ಕೈಲಾಶ್ ಮಹತೋನನ್ನು ಬರಾರಿ ರೆಫರಲ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಕೈಲಾಶ್ ಮಹತೋ ಜೆಡಿಯುನಲ್ಲಿ ಕತಿಹಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು.