ಕರ್ನಾಟಕ

karnataka

ಮಳೆಯಲ್ಲಿ ಮುಳುಗಿದ ತೂತುಕುಡಿ, ದೇವಾಲಯಗಳ ನಾಡು ರಾಮೇಶ್ವರಂಗೆ ಭಕ್ತಸಾಗರ ಭೇಟಿ, ಚೆನ್ನೈಗೆ ‘ಆರೆಂಜ್​’

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಮಿಳುನಾಡು ತತ್ತರಿಸುತ್ತಲೇ ಹೋಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆರಾಯನ ಕಾಟ ಇನ್ನು ತಪ್ಪುತ್ತಿಲ್ಲ. ಈಗ ಮತ್ತೆ ಚೆನ್ನೈಗೆ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​ ಘೋಷಿಸಿದ್ದು, ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

By

Published : Nov 26, 2021, 1:23 PM IST

Published : Nov 26, 2021, 1:23 PM IST

Rains lash Thoothukodi, Ramanathapuram rain, orange alert for Chennai, Tamilnadu rain news, ಮಳೆಯಲ್ಲಿ ಮುಳುಗಿದ ತೂತುಕೋಡಿ, ದೇವಾಲಯಗಳ ನಾಡು ರಾಮೇಶ್ವರಂಗೆ ಭಕ್ತರು ಭೇಟಿ, ಚೆನ್ನೈಗೆ ಆರೆಂಜ್​ ಅಲರ್ಟ್​, ತಮಿಳುನಾಡು ಮಳೆ ಸುದ್ದಿ,
ಮಳೆಯಲ್ಲಿ ಮುಳುಗಿದ ತೂತುಕೋಡಿ

ಚೆನ್ನೈ:ತಮಿಳುನಾಡಿನ ತೂತುಕುಡಿ ಸೇರಿದಂತೆ ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಅಷ್ಟೇ ಅಲ್ಲದೇ ರಾಮನಾಥಪುರಂ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ.

ಇಂದು ಮತ್ತು ನಾಳೆ ಚೆನ್ನೈಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 'ಆರೆಂಜ್' ಅಲರ್ಟ್ ಘೋಷಿಸಿದೆ. ರಾಮನಾಥಪುರಂ ಜಿಲ್ಲಾಧಿಕಾರಿ ಪರಮಕುಡಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಗ್ಗು ಪ್ರದೇಶಗಳ ಪರಿಸ್ಥಿತಿ ಕುರಿತು ಸಭೆ ನಡೆಸಿದರು. ಆರ್.ಎಸ್. ಮಂಗಳಂ ಕಂದಾಯ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುವಂತೆ ಡಿಸಿ ಸೂಚಿಸಿದ್ದಾರೆ.

ಈಶಾನ್ಯ ಮಾನ್ಸೂನ್ ಆಗಮನ ಮತ್ತು ಭಾರೀ ಮಳೆಯಿಂದಾಗಿ ದೇವಾಲಯಗಳ ನಾಡು ರಾಮೇಶ್ವರಂಗೆ ಯಾತ್ರಾರ್ಥಿಗಳ ಹರಿವು ತಟ್ಟಿದೆ ಎಂದು ಜಿಲ್ಲೆಯ ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಾಥಪುರಂ ಜಿಲ್ಲಾಡಳಿತವು ಸಾರ್ವಜನಿಕರಿಗೆ ಯಾವುದೇ ಸಹಾಯಕ್ಕಾಗಿ ವಿಶೇಷ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದ್ದು, ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1077 ಅನ್ನು ಸಂಪರ್ಕಿಸಬಹುದು.

ರಾಮೇಶ್ವರಂನಲ್ಲಿ 76.20ಮಿಮೀ, ಪಂಬನ್‌ನಲ್ಲಿ 42.10ಮಿಮೀ, ತಂಗಚಿಮಡಂನಲ್ಲಿ 30.50ಮಿಮೀ ಮಳೆಯಾಗಿದೆ. ಕನ್ನಿಯಕುಮಾರಿ, ತಿರುನಲ್ವೇಲಿ, ತೂತುಕುಡಿ, ತೆಂಕಶಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಹಾಗೂ ಕಡಲೂರುಗಳಲ್ಲಿ ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ABOUT THE AUTHOR

...view details