ವಿಶಾಖಪಟ್ಟಣ, ಆಂಧ್ರಪ್ರದೇಶ:ವಿಶಾಖ ಬೀಚ್ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಯುವತಿಯೊಬ್ಬಳು ಮದ್ಯದ ಅಮಲಿನಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಸಾರ್ವಜನಿಕವಾಗಿ ಮದ್ಯ ಸೇವಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸ್ಥಳೀಯರು ಹಾಗೂ ಪೊಲೀಸರನ್ನು ನಿಂದಿಸಿದ್ದಾರೆ. ತಡೆಯಲು ಮುಂದಾದವರಿಗೆ ಕಾಲಿನಿಂದ ಒದ್ದು ಗಲಾಟೆ ಮಾಡಿದ್ದಾರೆ.
ಏನಿದು ಪ್ರಕರಣ?: ಬೀಚ್ ರಸ್ತೆಯ ವೈಎಂಸಿಎ ಬಳಿ ರಾತ್ರಿ 11.30ರ ಸುಮಾರಿಗೆ ಯುವತಿಯೊಬ್ಬರು ಮದ್ಯ ಸೇವಿಸುತ್ತಿದ್ದರು. ಈ ಬಗ್ಗೆ ಅಲ್ಲಿದ್ದ ಕೆಲವರು ಪ್ರಶ್ನಿಸಿದಾಗ ಯುವತಿ ಹೈಡ್ರಾಮ ಸೃಷ್ಟಿಸಿದ್ದಾರೆ. ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದಾರೆ. ಸ್ಥಳೀಯರು ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಗೆ ಸಾರ್ವಜನಿಕವಾಗಿ ಮದ್ಯ ಸೇವಿಸದಂತೆ ಸೂಚಿಸಿ ಅಲ್ಲಿಂದ ತೆರಳುವಂತೆ ಹೇಳಿದ್ದಾರೆ. ಆದರೆ ಆ ಯುವತಿ, ನೀವು ನನ್ನನ್ನು ಪ್ರಶ್ನಿಸುತ್ತೀರಾ? ನನ್ನ ‘ಎಟಿಎಂ’ಗೆ ಹೇಳಿ ನಿಮ್ಮ ಇಲಾಖೆ ಗತಿ ಕಾಣಿಸ್ತಿನಿ ಎಂದು ಪೊಲೀಸರ ಮೇಲೆ ರೇಗಾಡಿದ್ದಾರೆ.
ಕುಡಿದಮತ್ತಿನಲ್ಲಿ ಹಲ್ಲೆ:ಅಷ್ಟೇ ಅಲ್ಲ ಯುವತಿ ಕುಡಿದ ಮತ್ತಿನಲ್ಲಿ ಎಎಸ್ಐ ಸತ್ಯನಾರಾಯಣರ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ವೇಳೆ ಗೋವಿಂದ್ ಎಂಬ ಯುವಕ ಆಕೆಯನ್ನು ತಡೆಯಲು ಯತ್ನಿಸಿದಾಗ ಆತನಿಗೆ ಬಿಯರ್ ಬಾಟಲ್ ನಿಂದ ದಾಳಿ ಮಾಡಿದ್ದಾಳೆ. ಈ ವೇಳೆ ಗೋವಿಂದ್ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.