ಸೊಲ್ಲಾಪುರ(ಮಹಾರಾಷ್ಟ್ರ):ಮದುವೆಯಾಗಲು ತನಗೆ ಹುಡುಗಿ ಸಿಗುತ್ತಿಲ್ಲ ಎಂದು ನೊಂದಿದ್ದ ಯುವಕನೊಬ್ಬ, 'ಬಾಲ್ಯ ವಿವಾಹ ಯಾಕೆ ಮಾಡಲಿಲ್ಲ' ಎಂದು ಕೋಪಗೊಂಡು ತನ್ನ ಅಜ್ಜಿಯನ್ನೇ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.
ಮಲಂಬಿ ಹಸನ್ ಸಾಹಬ್ ನದಾಫ್ (70) ಕೊಲೆಯಾದ ಅಜ್ಜಿ. ಸಲೀಂ ಜಹಾಂಗೀರ್ ನದಾಫ್ ಕೊಲೆ ಮಾಡಿದ ಆರೋಪಿ. ಕರ್ನಾಟಕದ ಕಲಬುರಗಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಲೀಂನನ್ನು ಸೊಲ್ಲಾಪುದಲ್ಲಿರುವ ಅಜ್ಜಿ ಮಲಂಬಿ ಈಚೆಗಷ್ಟೇ ಕರೆಸಿಕೊಂಡಿದ್ದಳು. ಈ ವೇಳೆ ನದಾಫ್ ವಿವಾಹದ ವಿಚಾರವಾಗಿ ಚರ್ಚೆ ನಡೆದಿದೆ. ಹುಡುಗಿ ಸಿಗದೇ ಬೇಸತ್ತಿದ್ದ ಸಲೀಂ ಜಹಾಂಗೀರ್ ಅಜ್ಜಿಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಸ್ಥಳದಲ್ಲೇ ಮೂರ್ಛೆ ಹೋದ ಅಜ್ಜಿ ಮಲಂಬಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಹುಡುಗಿ ಹುಡುಕಿ ಸುಸ್ತಾಗಿದ್ದ ಸಲೀಂ:ಕಲಬುರಗಿಯಲ್ಲಿ ಕೆಲಸ ಮಾಡಿಕೊಂಡಿರುವ ಸಲೀಂ ಜಹಾಂಗೀರ್ ವಿವಾಹವಾಗಲು ಕೆಲ ದಿನಗಳಿಂದ ಹುಡುಗಿ ಹುಡುಕಾಡುತ್ತಿದ್ದ. ಆದರೆ, ಎಲ್ಲಿಯೂ ನಿಶ್ಚಯವಾಗದ ಕಾರಣ ಬೇಸತ್ತಿದ್ದ. ಸಲೀಂಗೆ ಇದು ಅವನ ಕುಟುಂಬದವರ ಮೇಲೆಯೇ ಸಿಟ್ಟು ತರಿಸಿತ್ತು.