ಸಮಸ್ತಿಪುರ(ಬಿಹಾರ):ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಅನೇಕ ಹುಡುಗಿಯರನ್ನ ಕೊಲೆ ಮಾಡಲಾಗುತ್ತದೆ ಅಥವಾ ಮಾಂಸದ ವ್ಯಾಪಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ಬಿಹಾರದ ಡಿಜಿಪಿ ಎಸ್ಕೆ ಸಿಂಘಾಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
'ಸಮಾಜ ಸುಧಾರ್' ಅಭಿಯಾನದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಎಸ್ಕೆ ಸಿಂಘಾಲ್ ಈ ರೀತಿಯಾಗಿ ಹೇಳಿಕೆ ನೀಡಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಬೇಕು ಮತ್ತು ಅವರಿಗೆ ಉತ್ತಮವಾದ ಮೌಲ್ಯಗಳನ್ನ ಕಲಿಸಬೇಕೆಂದು ಸಲಹೆ ನೀಡಿದ್ದಾರೆ.
ಮದುವೆ ಮಾಡಿಕೊಳ್ಳಲು ಹೆಣ್ಣು ಮಕ್ಕಳು ಪೋಷಕರ ಒಪ್ಪಿಗೆಯಿಲ್ಲದೆ ಮನೆ ತೊರೆದ ಅನೇಕ ಪ್ರಕರಣ ನಾವು ನೋಡಿದ್ದೇವೆ. ಅವರಲ್ಲಿ ಅನೇಕ ಯುವತಿಯರನ್ನ ಕೊಲೆ ಮಾಡಲಾಗುತ್ತದೆ. ಕೆಲವರನ್ನ ಮಾಂಸದ ವ್ಯಾಪಾರಕ್ಕೆ ಒತ್ತಾಯಿಸಲಾಗುತ್ತದೆ. ಮಕ್ಕಳ ಇಂತಹ ನಿರ್ಧಾರದಿಂದ ಪೋಷಕರು ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.