ನೆಲ್ಲೂರು(ಆಂದ್ರಪ್ರದೇಶ): ಈ ಊರಿನಲ್ಲೊಂದು ವಿಶೇಷ ದೇವಸ್ಥಾನವಿದೆ. ಆದರೆ ಇದು ಯಾವುದೇ ದೇವರ ದೇವಸ್ಥಾನವಲ್ಲ. ಬದಲಾಗಿ ತಂದೆಯೊಬ್ಬರು ತಮ್ಮ ಮಗಳಿಗಾಗಿ ಪ್ರೀತಿಯಿಂದ ಕಟ್ಟಿಸಿದ ದೇವಸ್ಥಾನವಿದು. ಅಗಲಿದ ಮಗಳನ್ನು ಮರೆಯಲಿಕ್ಕಾಗದ ತಂದೆ ಆಕೆಯ ನೆನಪಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ಪ್ರತಿವರ್ಷ ಇಲ್ಲಿ ಹಬ್ಬವನ್ನೂ ಆಚರಿಸಲಾಗುತ್ತದೆ. ಇಂಥದೊಂದು ವಿಶೇಷ ದೇವಾಲಯ ಇರುವುದು ನೆಲ್ಲೂರಿನ ವೆಂಕಟಾಚಲಂ ಮಂಡಲದ ಕಾಕುತೂರಿನಲ್ಲಿ.
ದೇವಸ್ಥಾನ ಕಟ್ಟಿಸಿದ ಹಿಂದಿನ ಕಥೆ:ಗ್ರಾಮದ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳು. ನಾಲ್ಕನೆಯ ಮಗಳು ಸುಬ್ಬಲಕ್ಷ್ಮಮ್ಮ. ಆಕೆಯ ಜನನದ ನಂತರ ಕುಟುಂಬವು ಆರ್ಥಿಕವಾಗಿ ಸದೃಢವಾಯಿತು. ಕುಟುಂಬಕ್ಕೆ ಸಮಾಜದಲ್ಲಿ ಉತ್ತಮ ಗೌರವಾದರಗಳು ದೊರೆತವು.