ಪಟಿಯಾಲ: ರಾಜ್ಯದಲ್ಲಿ ಪ್ರಿಪೇಯ್ಡ್ ಮೀಟರ್ಗಳನ್ನು ಅಳವಡಿಸಿ, ಇಲ್ಲವೇ ಹಣವನ್ನು ಕಳೆದುಕೊಳ್ತಿರಾ ಎಂದು ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ಮೇರೆಗೆ ಪಂಜಾಬ್ನಲ್ಲಿ ಪ್ರಿಪೇಯ್ಡ್ ಮೀಟರ್ಗಳನ್ನು ಅಳವಡಿಸುವ ಕಾರ್ಯ ಮುಂದುವರೆದಿದೆ. ವಿದ್ಯುತ್ ಇಲಾಖೆ ಇದುವರೆಗೆ ಪಂಜಾಬ್ನ ಹಲವು ಹಳ್ಳಿಗಳಲ್ಲಿ ಈ ಮೀಟರ್ಗಳನ್ನು ಅಳವಡಿಸಿದೆ.
ಪ್ರಿಪೇಯ್ಡ್ ಮೀಟರ್ಗಳನ್ನು ಅಳವಡಿಸದಂತೆ ರೈತರ ಆಗ್ರಹ ಒಂದೆಡೆ ವಿದ್ಯುತ್ ಇಲಾಖೆಯ ನೌಕರರು ಈ ಮೀಟರ್ಗಳನ್ನು ಅಳವಡಿಸುತ್ತಿದ್ದರೇ, ಮತ್ತೊಂದೆಡೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮಗಳಿಂದ ಈ ಮೀಟರ್ಗಳನ್ನು ತೆಗೆದು ವಿದ್ಯುತ್ ಇಲಾಖೆಗೆ ವಾಪಸ್ ನೀಡುತ್ತಿದ್ದಾರೆ. ಈ ರೀತಿಯ ಘಟನೆ ಇತ್ತೀಚೆಗೆ ಪಟಿಯಾಲಾದ ಗ್ರಾಮಗಳಾದ ಧಕ್ದರ್ಬಾ, ರಾಜ್ಗಢ, ಬೀಬಿಪುರ ಇತ್ಯಾದಿಗಳಿಂದ ಕಂಡುಬಂದಿದೆ.
ವಾಸ್ತವವಾಗಿ ಇಲ್ಲಿನ ನೀರಿನ ಟ್ಯಾಂಕ್ಗಳ ಮೇಲೆ ಪ್ರಿಪೇಯ್ಡ್ ಮೀಟರ್ನನ್ನು ಅಳವಡಿಸಲಾಗಿತ್ತು. ಆದ್ರೆ ಸ್ಥಳಕ್ಕಾಗಮಿಸಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡರು ಹಾಗೂ ಕಾರ್ಯಕರ್ತರು ಮೀಟರ್ ತೆಗೆದು ಎಸ್ಡಿಒಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ರೈತ ಸಂಘ ಕೂಡ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪಂಜಾಬ್ನಲ್ಲಿ ಪ್ರಿಪೇಯ್ಡ್ ಮೀಟರ್ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸಲು ಬಿಡುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ
ಯಾವುದೇ ಗ್ರಾಮ ಅಥವಾ ಪಟ್ಟಣದಲ್ಲಿ ಈ ಮೀಟರ್ಗಳನ್ನು ಅಳವಡಿಸಿದರೆ ಅದನ್ನು ವಿರೋಧಿಸಬೇಕು. ಅಲ್ಲದೇ ಈ ಮೀಟರ್ಗಳನ್ನು ಅಳವಡಿಸುವುದನ್ನು ನಿಲ್ಲಿಸಬೇಕು. ಇದರಿಂದ ಪಂಜಾಬ್ ಲೂಟಿಯಾಗುವುದಿಲ್ಲ ಎಂದು ರೈತ ಮುಖಂಡರು ಪಂಜಾಬ್ನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.