ಕರ್ನಾಟಕ

karnataka

By

Published : Apr 13, 2021, 3:07 PM IST

ETV Bharat / bharat

ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಯಾರಾದರೂ ತಮ್ಮ ಮಿತಿಗಳನ್ನು ಮೀರುವ ಮೊದಲು ನೀವು ಸಿತಾಲ್ಕುಚಿಯಲ್ಲಿ ಏನಾಯಿತು ಎಂದು ಅರಿತುಕೊಳ್ಳಿ. ಹಲವಾರು ಸ್ಥಳಗಳಲ್ಲಿ ಸಿತಾಲ್ಕುಚಿ ಇರಲಿದೆ" ಎಂದು ಘೋಷ್ ಹೇಳಿದ್ದನ್ನು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ..

ECI
ECI

ನವದೆಹಲಿ :ಕೂಚ್ ಬೆಹಾರ್ ಜಿಲ್ಲೆಯಲ್ಲಿ ಮತದಾನದ ವೇಳೆ ಕೇಂದ್ರ ಪಡೆಗಳು ಗುಂಡು ಹಾರಿಸಿದ್ದರಿಂದ ನಾಲ್ಕು ಜನ ಸಾವನ್ನಪ್ಪಿದ ನಂತರ "ಹಲವಾರು ಸ್ಥಳಗಳಲ್ಲಿ ಸಿತಾಲ್ಕುಚಿ" ಇರಲಿದೆ ಎಂದು ಹೇಳಿದ್ದಕ್ಕಾಗಿ ಭಾರತೀಯ ಚುನಾವಣಾ ಆಯೋಗ ಇಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ನೋಟಿಸ್ ನೀಡಿದೆ.

ನೋಟಿಸ್‌ಗೆ ಸ್ಪಂದಿಸಲು ಮತ್ತು ಬುಧವಾರ ಬೆಳಗ್ಗೆ ಅವರ ಟೀಕೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೋರಲಾಗಿದೆ. ಘೋಷ್ ವಿರುದ್ಧ ತೃಣಮೂಲ ಕಾಂಗ್ರೆಸ್ ಆಯೋಗವನ್ನು ಸಂಪರ್ಕಿಸಿತ್ತು.

"ಯಾರಾದರೂ ತಮ್ಮ ಮಿತಿಗಳನ್ನು ಮೀರುವ ಮೊದಲು ನೀವು ಸಿತಾಲ್ಕುಚಿಯಲ್ಲಿ ಏನಾಯಿತು ಎಂದು ಅರಿತುಕೊಳ್ಳಿ. ಹಲವಾರು ಸ್ಥಳಗಳಲ್ಲಿ ಸಿತಾಲ್ಕುಚಿ ಇರಲಿದೆ" ಎಂದು ಘೋಷ್ ಹೇಳಿದ್ದನ್ನು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details