ಕರ್ನಾಟಕ

karnataka

ETV Bharat / bharat

ಮನೀಶ್‌ ಸಿಸೋಡಿಯಾ ಭಾರತ ರತ್ನವೆಂದ ಕೇಜ್ರಿವಾಲ್, ಕೇಜ್ರಿವಾಲ್‌ಗೆ ನೊಬೆಲ್‌ ಕೊಡಿ ಎಂದ ಬಿಜೆಪಿ

ಸಚಿವ ಮನೀಶ್​ ಸಿಸೋಡಿಯಾ ಮೇಲೆ ಸಿಬಿಐ ದಾಳಿ ನಡೆಸಿದ ಬಗ್ಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕಿಡಿಕಾರಿದ್ದಾರೆ. ಶಿಕ್ಷಣದಲ್ಲಿ ಸುಧಾರಣೆ ತಂದ ಅವರಿಗೆ ಭಾರತ ರತ್ನ ನೀಡಬೇಕು ಎಂದಿದ್ದಾರೆ. ಇದನ್ನು ಬಿಜೆಪಿ ಲೇವಡಿ ಮಾಡಿದ್ದು, ಕೇಜ್ರಿವಾಲ್​ರಿಗೂ ನೊಬೆಲ್ ಪ್ರಶಸ್ತಿ​ ನೀಡಿ ಎಂದು ವ್ಯಂಗ್ಯವಾಡಿದೆ.

By

Published : Aug 23, 2022, 10:32 AM IST

delhi-cm-arvind-kejriwal
ಅರವಿಂದ್​ ಕೇಜ್ರಿವಾಲ್​

ಅಹಮದಾಬಾದ್:ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬದಲಾವಣೆ, ಕ್ರಾಂತಿಗೆ ಕಾರಣರಾದ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರಿಗೆ ಭಾರತ ರತ್ನ ಕೊಡಬೇಕಿತ್ತು. ಆದರೆ, ಬಿಜೆಪಿ ಇವರ ವಿರುದ್ಧ ಪಿತೂರಿ ಮಾಡಿ ವಿನಾಕಾರಣ ದ್ವೇಷ ಸಾಧಿಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಮ್ಮ ಬಂಟನ ಬೆಂಬಲಕ್ಕೆ ನಿಂತಿದ್ದಾರೆ.

ಸಿಸೋಡಿಯಾ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದೆಹಲಿ ಸಿಎಂ, ದೆಹಲಿ ಶಾಲಾ ಕಾಲೇಜುಗಳಲ್ಲಾದ ಸುಧಾರಣೆ ಬಗ್ಗೆ ವಿದೇಶಿ ಸುದ್ದಿ ಮಾಧ್ಯಮ​ ವರದಿ ಮಾಡಿ ಶ್ಲಾಘಿಸಿದೆ. ಇದನ್ನು ನಮ್ಮವರೇ ಗುರುತಿಸಿಲ್ಲ. ಸಿಸೋಡಿಯಾ ಶಿಕ್ಷಣದ ಸುಧಾರಣೆಗಾಗಿ ಭಾರತ ರತ್ನ ಪಡೆಯಲು ಅರ್ಹರಿದ್ದಾರೆ ಎಂದು ಹೊಗಳಿದ್ದಾರೆ.

ಗುಜರಾತ್​ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ನಮ್ಮನ್ನು ಕಟ್ಟಿಹಾಕಲು ಈ ರೀತಿ ಸಂಚು ರೂಪಿಸುತ್ತಿದೆ. ಉತ್ತಮ ಕೆಲಸ ಮಾಡುತ್ತಿರುವ ಮನೀಶ್​ ಸಿಸೋಡಿಯಾ ಅವರನ್ನು ಶ್ಲಾಘಿಸುವ ಬದಲು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಶೀಘ್ರವೇ ಅವರನ್ನು ಬಂಧಿಸಬಹುದು. ಮುಂದೆ ನನ್ನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್​ ಹೇಳಿದರು. ಕಳೆದ 27 ವರ್ಷಗಳ ಬಿಜೆಪಿಯ ದುರಾಡಳಿತದಿಂದ ಅಲ್ಲಿನ ಜನರು ಬೇಸತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿನ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯದ ಭರವಸೆ ನೀಡಿದರು.

ಕೇಜ್ರಿವಾಲ್ ಭಾರತ ರತ್ನ ಹೇಳಿಕೆಗೆ ಬಿಜೆಪಿ ಲೇವಡಿ:ಮನೀಶ್ ಸಿಸೋಡಿಯಾಗೆ ಭಾರತ ರತ್ನ ನೀಡಬೇಕು ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಬಿಜೆಪಿ ಲೇವಡಿ ಮಾಡಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮನೀಶ್​ "ಸಿಸೋಡಿಯಾಗೆ ಭಾರತ ರತ್ನ, ಸಚಿವ ಸತ್ಯೇಂದ್ರ ಜೈನ್‌ಗೆ ಪದ್ಮವಿಭೂಷಣ, ಸ್ವತಃ ಅರವಿಂದ್​ ಕೇಜ್ರಿವಾಲ್​ ಅವರಿಗೆ ಮುಂದಿನ ನೊಬೆಲ್​ ಪಾರಿತೋಷಕ ನೀಡಬೇಕು" ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ರಾಹುಲ್​ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು, ಇಲ್ಲದಿದ್ದರೆ ದೇಶಾದ್ಯಂತ ಕಾರ್ಯಕರ್ತರಿಗೆ ನಿರಾಶೆ: ಸಿಎಂ ಗೆಹ್ಲೋಟ್​

ABOUT THE AUTHOR

...view details