ಕರ್ನಾಟಕ

karnataka

ETV Bharat / bharat

ಶನಿವಾರದ ರಾಶಿ ಭವಿಷ್ಯ.. ಹೊಸ ವ್ಯಾಪಾರೋದ್ಯಮಕ್ಕೆ ಈ ರಾಶಿಯವರಿಗೆ ಸೂಕ್ತ ಸಮಯ

Horoscope Today: ಶನಿವಾರದ ದಿನ ಭವಿಷ್ಯ ಹೀಗಿದೆ.

By ETV Bharat Karnataka Team

Published : Sep 23, 2023, 5:31 AM IST

ಶನಿವಾರದ ರಾಶಿ ಭವಿಷ್ಯ
ಶನಿವಾರದ ರಾಶಿ ಭವಿಷ್ಯ

ಇಂದಿನ ಪಂಚಾಂಗ

ದಿನಾಂಕ : 23-09-2023, ಶನಿವಾರ

ಸಂವತ್ಸರ : ಶುಭಕೃತ್

ಆಯನ : ದಕ್ಷಿಣಾಯಣ

ಋತು :ಶರತ್​

ಮಾಸ :ಭಾದ್ರಪದ

ಪಕ್ಷ :ಶುಕ್ಲ

ತಿಥಿ :ಸಪ್ತಮಿ

ನಕ್ಷತ್ರ :ಜ್ಯೇಷ್ಠ

ಸೂರ್ಯೋದಯ: ಬೆಳಗ್ಗೆ06:07:00 ಗಂಟೆಗೆ

ಅಮೃತಕಾಲ: ಬೆಳಗ್ಗೆ07:38 ರಿಂದ 09:08 ವರೆಗೆ

ದುರ್ಮುಹೂರ್ತಂ: ಬೆಳಗ್ಗೆ 8:31 ರಿಂದ 9:19 ವರೆಗೆ ಹಾಗೂ ಮಧ್ಯಾಹ್ನ 14:55 ರಿಂದ 15:43 ಗಂಟೆವರೆಗೆ

ರಾಹುಕಾಲ: ಬೆಳಗ್ಗೆ 10:39 ರಿಂದ 12:10ವರೆಗೆ

ಸೂರ್ಯಾಸ್ತ: ಸಂಜೆ06:14:00 ಗಂಟೆಗೆ

ವರ್ಜ್ಯಂ : ಸಂಜೆ18:15 ರಿಂದ 19:50 ಗಂಟೆವರೆಗೆ

ಮೇಷ :ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ. ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯಲ್ಲಿ ಕೊಂಚ ಆನಂದ ನಿರೀಕ್ಷಿಸಬಹುದು. ನೀವು ಖ್ಯಾತ ವ್ಯಕ್ತಿಯಾಗುವ ಬಯಕೆ ಸದ್ಯದಲ್ಲೇ ಬೆಳಕು ಕಾಣಲಿದೆ.

ವೃಷಭ : ಮೇಲ್ವಿಚಾರಕರಾಗಿ ನೀವು ನಿಮ್ಮ ಪಾಲುದಾರರನ್ನು ಅತ್ಯಂತ ಅಸಾಮಾನ್ಯತೆಯಿಂದ ಮೀರುವ ಸಾಧ್ಯತೆ ಇದೆ. ನೀವು ಕಾಲದೊಂದಿಗೆ ನಿಮ್ಮ ವಿಧಾನವನ್ನು ಮೃದುಗೊಳಿಸಬೇಕು ಮತ್ತು ನೀವು ಬಳಸುವ ಅನಿಯಂತ್ರಿತ ವಿಧಾನಕ್ಕಿಂತ ಹೆಚ್ಚು ಪಾರದರ್ಶಕ ರೀತಿಯ ನಾಯಕತ್ವದತ್ತ ಮುನ್ನಡೆಯಬೇಕು. ಇದರೊಂದಿಗೆ ನೀವು ಯಶಸ್ಸು ಗಳಿಸುತ್ತೀರಿ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಿಮ್ಮ ಬದ್ಧತೆಯನ್ನು ತೋರುತ್ತೀರಿ.

ಮಿಥುನ: ಸಮುದಾಯ ಕೆಲಸಗಾರರು ಅಗತ್ಯ ಉತ್ತೇಜನ ಮತ್ತು ನೆರವನ್ನು ಮ್ಯಾನೇಜರ್​ಗಳು ಮತ್ತು ಕುಟುಂಬ ಸದಸ್ಯರಿಂದ ಪಡೆಯಬಹುದು. ವಿದ್ಯಾರ್ಥಿಯಾಗಿ ಶಿಕ್ಷಣದಲ್ಲಿ ನೀವು ನಿಮ್ಮ ಮನಸ್ಸಿಗೆ ಬರುವ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಈ ಹಂತವನ್ನು ಸರಿಯಾಗಿ ಬಳಸಿಕೊಳ್ಳುವುದು ಸೂಕ್ತ.

ಕರ್ಕಾಟಕ:ನೀವು ಕೆಲಸದಲ್ಲಿ ಮತ್ತು ಅದೇ ರೀತಿ ಹೃದಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಹಳ ಚುರುಕಾಗಿದ್ದೀರಿ. ನೀವು ನಿಮ್ಮ ಗಮನ ಕಳೆದುಕೊಳ್ಳುತ್ತಿರುವುದರಿಂದ ನಿಮ್ಮ ಮನಸ್ಸು ಈ ಪ್ರಸ್ತುತದ ವಾಸ್ತವಕ್ಕೆ ತರುತ್ತದೆ. ನೀವು ಕೆಲಸ ಪೂರ್ಣಗೊಳಿಸಲು ನಿಮ್ಮ ಅಧಿಕಾರದಲ್ಲಿರುವ ಏನನ್ನಾದರೂ ಮಾಡುತ್ತೀರಿ ಮತ್ತು ಮನೆಗೆ ನಿಮ್ಮ ಪ್ರೀತಿಪಾತ್ರರತ್ತ ತೆರಳುತ್ತೀರಿ.

ಸಿಂಹ :ನೀವು ಪ್ರಯಾಣವನ್ನು ಇಷ್ಟಪಡುತ್ತೀರಿ. ನೀವು ಪ್ರವಾಸ ಅಥವಾ ಪ್ರಯಾಣ ಯೋಜಿಸಿ ಅದರಲ್ಲಿ ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಒಳಗೊಳ್ಳುತ್ತೀರಿ. ಸೃಜನಶೀಲ ಕ್ಷೇತ್ರಗಳಲ್ಲಿ ಇರುವವರು ಅಗತ್ಯ ಪ್ರಶಂಸೆ ಪಡೆಯುತ್ತೀರಿ. ಚಲನಶೀಲ ದಿನ ಕಾಯುತ್ತಿದೆ.

ಕನ್ಯಾ : ನಿಮ್ಮ ಚಾಲನಾಶಕ್ತಿ ನಿಮ್ಮ ಹಣೆಬರಹವನ್ನು ನಿಮ್ಮದೇ ಕೈಗಳಿಗೆ ತೆಗೆದುಕೊಳ್ಳಬೇಕೆನ್ನುವ ಒಂದೇ ಮನಸ್ಸಿನ ಬಯಕೆ. ನಿಮ್ಮ ಆಡಳಿತ ಸಾಮರ್ಥ್ಯಗಳು ದೋಷರಹಿತವಾಗಿವೆ ಮತ್ತು ಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಜವಾಬ್ದಾರಿಗಳತ್ತ ನಿಮ್ಮನ್ನು ಉತ್ತೇಜಿಸುತ್ತದೆ. ನಿಮ್ಮ ನಾಯಕತ್ವ ಮತ್ತು ಚಿಂತಿಸುವ ಕೌಶಲ್ಯಗಳು ನಿಮ್ಮ ಸಂಘಟನಾ ಕೌಶಲ್ಯಗಳನ್ನು ಹೆಚ್ಚಾಗಿಸುತ್ತವೆ.

ತುಲಾ :ನಿಮ್ಮ ಈ ದಿನ ಅತ್ಯಂತ ಒತ್ತಡದಲ್ಲಿದೆ. ಇದರಿಂದ ನೀವು ಕೊಂಚ ಗೊಂದಲಗೊಳ್ಳುತ್ತೀರಿ. ನಿಮ್ಮ ಎಲ್ಲವನ್ನೂ ಎದುರಿಸುವ ಸ್ವಭಾವವೂ ಜೀವನ ನಿಮ್ಮ ಮೇಲೆ ಸುರಿಸುವ ದುಃಖದ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳನ್ನು ಎದುರಿಸುವಂತೆ ಮಾಡುತ್ತದೆ. ಆದರೆ, ನೀವು ಎಲ್ಲ ಸನ್ನಿವೇಶಗಳನ್ನೂ ನಿಮ್ಮ ಆಂತರಿಕ ಸಾಮರ್ಥ್ಯದಿಂದ ಎದುರಿಸುತ್ತೀರಿ.

ವೃಶ್ಚಿಕ : ನಿಮ್ಮ ಮನಸ್ಸಿನಲ್ಲಿ ನೀವು ಓದಿದ ವ್ಯಕ್ತಿತ್ವ ವಿಕಸನದ ಪುಸ್ತಕಗಳಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದೀರಿ ಎಂದು ಕಾಣುತ್ತದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮ ಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ. ನೇರವಾಗಿ ಹೇಳಬೇಕೆಂದರೆ, ನಿಮ್ಮ ವ್ಯಕ್ತಿತ್ವ ಎಲ್ಲರೂ ಗಮನಿಸುವಂತೆ ಮಾಡುತ್ತದೆ.

ಧನು : ಸ್ಪಷ್ಟತೆಯಿಲ್ಲದೆ ಓಡುವುದು ಮತ್ತು ಗೊಂದಲದ ಕೆಲಸಗಳು ನಿಮಗಾಗಿ ಕಾದಿವೆ. ಒಂದೇ ಕ್ಷಣದಲ್ಲಿ ಶಾಂತಿಯನ್ನೂ ಕಾಣಲಾರಿರಿ. ಆದರೆ ಬಿಡುವು ತೆಗೆದುಕೊಳ್ಳಿ. ಅವ್ಯವಸ್ಥೆಯಿಂದ ಹಿಂದೆ ಸರಿಯಿರಿ. ಅದರ ಸಂಪೂರ್ಣ ಸಾಧ್ಯತೆ ಗಮನಿಸಿ.

ಮಕರ:ವ್ಯರ್ಥವಾದ ವೆಚ್ಚ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮಾಡುತ್ತದೆ. ನೀವು ಆನಂದಿಸಲು ಇಂದು ಕಾರಣಗಳಿವೆ. ನಗದು ಹರಿವು ಮತ್ತು ಅದರ ಗಮನಾರ್ಹ ಮೊತ್ತದಿಂದ ನೀವು ನಿಮ್ಮ ಹಣಕಾಸಿನ ಕುರಿತು ಸಂತೋಷ ಹೊಂದುವಂತೆ ಮಾಡುತ್ತದೆ. ಕೆಲಸ ಎಂದಿನಂತೆ ಮುಂದುವರೆಯುತ್ತದೆ.

ಕುಂಭ : ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಮಹತ್ವಾಕಾಂಕ್ಷಿ ಮತ್ತು ಬಹಳ ಹೆಮ್ಮೆ ಪಡುತ್ತೀರಿ. ನೀವು ಅಗತ್ಯವಿದ್ದಲ್ಲಿ ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮದೇ ದಾರಿಯನ್ನು ರೂಪಿಸಿಕೊಳ್ಳುತ್ತೀರಿ. ಇದಲ್ಲದೆ ನೀವು ಬಯಸಿದ್ದು ಆಗಲು ಅಗತ್ಯವಾದ ಸಾಮರ್ಥ್ಯಗಳು ಮತ್ತು ದಕ್ಷತೆ ಇದೆ ಎನ್ನುವುದನ್ನು ದೃಢಪಡಿಸುತ್ತೀರಿ.

ಮೀನ : ನೀವು ಅತ್ಯಂತ ಸಣ್ಣ ಮತ್ತು ಕ್ಷುಲ್ಲಕ ಕಾರಣಗಳಿಗೆ ದುಃಖಿತರಾಗುವುದರ ಕುರಿತು ಎಚ್ಚರಿಕೆ ವಹಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ಸ್ವಯಂ-ನಿಯಂತ್ರಣ ನೆರವಾಗುತ್ತದೆ. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲು ನಿಮಗೆ ನೆರವಾಗುತ್ತವೆ.

ABOUT THE AUTHOR

...view details