ಕರ್ನಾಟಕ

karnataka

ETV Bharat / bharat

ಹವಾಮಾನ ಬದಲಾವಣೆ: ಅಸ್ಸೋಂನಲ್ಲಿ ಗಣನೀಯವಾಗಿ ಇಳಿಕೆ ಕಂಡ ಟೀ ಉತ್ಪಾದನೆ

ಚಹಾ ಎಂದರೆ ಮೊದಲು ನೆನಪಾಗುವುದು ಅಸ್ಸೋಂ, ಅಸ್ಸೋಂನ ರಾಜ್ಯದ ಬಹುತೇಕ ಆದಾಯ ಈ ಚಹಾ ಉದ್ಯಮದ ಮೇಲೆ ಅವಲಂಬಿತವಾಗಿದೆ. ಆದರೆ, ಕಳೆದ ಹಲವಾರು ವರ್ಷದಿಂದ ಟೀ ಉತ್ಪಾದನೆ ಕುಂಠಿತವಾಗಿದೆ.

By

Published : Apr 14, 2023, 12:21 PM IST

http://10.10.50.80:6060/reg-lowres/14-April-2023/assam-tea-gardens-640-1_1404newsroom_1681443243_521.jpg
http://10.10.50.80:6060/reg-lowres/14-April-2023/assam-tea-gardens-640-1_1404newsroom_1681443243_521.jpg

ಗುವಾಹಟಿ: ಅಸ್ಸೋಂ ಚಹಾ ಉದ್ಯಮ 200ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಆದರೆ, ರಾಜ್ಯದ ಚಹಾ ಉದ್ಯಮ ಕರುಣಾಜನಕ ಪರಿಸ್ಥಿತಿಯಲ್ಲಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಚಹಾ ಉದ್ಯಮವೂ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದು, ಅನೇಕರ ಜೀವನ ಕೂಡ ಈ ಟೀ ಉದ್ಯಮವನ್ನು ಅವಲಂಬಿಸಿದೆ. ರಾಜ್ಯದಲ್ಲಿ ಟೀ ಎಸ್ಟೇಟ್​ ಸಂಖ್ಯೆ ಅಥವಾ ಟೀ ಬೆಳೆಗಳ ಭೂಮಿಗಳ ಸಂಖ್ಯೆ ಹೆಚ್ಚಾಗಿತ್ತಿದೆಯಾದರೂ ಪ್ರತಿ ವರ್ಷ ಟೀ ಉತ್ಪನ್ನಗಳ ಸಂಖ್ಯೆ ಮಾತ್ರ ಕುಸಿಯುತ್ತದೆ.

ಚಹಾ ಉದ್ಯಮ

ಇಳಿಕೆ ಕಂಡ ಉತ್ಪಾದನೆ: 2017ರ ಸರ್ಕಾರದ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ಸಣ್ಣ ಟೀ ಎಸ್ಟೇಟ್​ ಸೇರಿದಂತೆ 88,442 ಟೀ ತೋಟಗಳಿವೆ. 2022ರಲ್ಲಿ ಈ ಸಂಖ್ಯೆ 1,22,440 ಆಗಿದೆ. 2017ರಲ್ಲಿ ಟೀ ಕೃಷಿಗೆ 3.14 ಲಕ್ಷ ಹೆಕ್ಟೇರ್​ಗಳಲ್ಲಿ ನಡೆಯುತ್ತಿತ್ತು. ಈ ಸಂಖ್ಯೆ ಕೂಡ ಏರಿಕೆ ಕಂಡಿದ್ದು, 2022ರಲ್ಲಿ 3.47 ಲಕ್ಷ ಹೆಕ್ಟೇರ್​ನಲ್ಲಿ ಟೀ ಕೃಷಿ ನಡೆಯುತ್ತಿದೆ. ಟೀ ಗಾರ್ಡನ್​ಗಳ ಗಾತ್ರ ಮತ್ತು ಟೀ ಬೆಳೆಯುವ ಭೂಮಿಗಳು ಏರಿಕೆ ಕಂಡಿದೆ. ಆದರೆ, ಈ ಹಿಂದಿಗೆ ಹೋಲಿಕೆ ಮಾಡಿದರೆ ಉತ್ಪಾದನೆ ಮತ್ತು ಉತ್ಪನ್ನಗಳಲ್ಲಿ ಮಾತ್ರ ಗಂಡನೀಯವಾಗಿ ಕಡಿಮೆಯಾಗಿದೆ. 2017ರಲ್ಲಿ ರಾಜ್ಯದಲ್ಲಿ ಒಟ್ಟಾರೆ ಟೀ ಉತ್ಪಾದನೆ 66.53 ಕೋಟಿ ಇದ್ದು, ಹೆಕ್ಟೇರ್​ ಭೂಮಿಯಲ್ಲಿ 2119 ಕೆಜಿ ಇಳುವರಿಯಾಗುತ್ತಿತ್ತು. ಆದರೆ, ಆಗಸ್ಟ್​ನಲ್ಲಿ ಈ ಉತ್ಪಾದನೆ 39.28 ಕೋಟಿ ಕೆಜಿ ಆಗಿದ್ದು, ಹೆಕ್ಟೇರ್​ ಭೂಮಿಯಲ್ಲಿ ಇಳುವರಿ 1132 ಕೆಜಿ ಆಗಿದೆ.

ತಜ್ಞರು ಹೇಳುವಂತೆ, ಟೀ ತೋಟಗಳ ಸಂಖ್ಯೆ ಮತ್ತು ಟೀ ಬೆಳೆಯುವ ಭೂಮಿಯ ಉತ್ಪಾದನೆ ಹೆಚ್ಚಾದರೂ ಅದರ ಉತ್ಪಾದನೆಯಲ್ಲಿ ಇಳಿಮುಖವಾಗುತ್ತಿದೆ ಎಂದರೆ ರಾಜ್ಯದ ಆರ್ಥಿಕತೆ ಕಷ್ಟದಲ್ಲಿದೆ ಎಂದು ಅರ್ಥ ಎಂದಿದ್ದಾರೆ. ಮಾರ್ಚ್​ 16ರ ಅಸ್ಸೋಂನ ಆರ್ಥಿಕ ಸಮೀಕ್ಷೆ, ಚಹಾ ವಲಯದಲ್ಲಿನ ಕರಾಳ ಸ್ಥಿತಿಯನ್ನು ತಿಳಿಸಿದೆ.

ರಾಜ್ಯದ ಆರ್ಥಿಕ ವಲಯದಲ್ಲಿ ಚಹಾ ಉದ್ಯಮ ವಲಯ ಗಮನಾರ್ಹ ಕೊಡುಗೆ ನೀಡುತ್ತಿದೆ. ಆದರೆ, ಕಳೆದ ಕೆಲವು ವರ್ಷದಿಂದ ಚಹಾ ಉದ್ಯಮ ಪರಿಸ್ಥಿತಿ ಕರುಣಾನಕವಾಗಿದೆ. ಅನೇಕ ಕಾರಣಗಳಿಂದಾಗಿ ಒಟ್ಟಾರೆ ಟೀ ಉತ್ಪಾದನೆ ಕಡಿಮೆಗೊಳ್ಳುತ್ತಿದೆ.

ಹವಾಮಾನ ಕಾರಣ: ಇನ್ನು ರಾಜ್ಯದ ಆದಾಯ ಮೂಲಗಳಲ್ಲಿ ಒಂದಾಗಿರುವ ಚಹಾ ಉದ್ಯಮದಲ್ಲಿ ಉತ್ಪಾದನೆ ಕುಂಠಿತಗೊಳ್ಳುವಿಕೆಯಲ್ಲಿ ಪ್ರಮುಖ ಕಾರಣಗಳಲ್ಲಿ ಒಂದು ಹವಾಮಾನ ಬದಲಾವಣೆ ಆಗಿದೆ. ಈ ಪರಿಸ್ಥಿತಿಯ ನಿರ್ವಹಣೆಗೆ ಟೀ ಕಾರ್ಪೊರೇಷನ್​ ಆಫ್​ ಇಂಡಿಯಾ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಅದು ಸಣ್ಣ ಚಹಾ ಬೆಳೆಗಾರರ ​​ಚಹಾ ಬೆಲೆಗಳನ್ನು ಹಾಗೇ ಇರಿಸಲು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು. ಇದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಯೋಜನೆ ಅವಳಡಿಕೆಗೆ ಪರಿಸ್ಥಿತಿ ಬದಲಾವಣೆಗೆ ರಾಷ್ಟ್ರೀಯ ದತ್ತು ನಿಧಿ ಬಳಕೆ ಮಾಡಲಾಗುವುದು. ಆದರೆ, ಈ ಯೋಜನೆಯನ್ನು ಸರಿಯಾಗಿ ಜಾರಿಗೆ ತರಲಾಗುತ್ತಿಲ್ಲ. ಹವಾಮಾನ ಬದಲಾವಣೆ ಭವಿಷ್ಯದ ಚಹಾ ಉದ್ಯಮದಲ್ಲಿ ಹಲವು ಬಿಕ್ಕಟ್ಟಿಗೆ ಕಾರಣವಾಗಲಿದೆ. ಇದರಿಂದಾಗಿ ಈ ಉದ್ಯಮದ ಜೊತೆಗೆ ನಂಟು ಹೊಂದಿರುವ 1.16 ಮಿಲಿಯನ್​ ಕೆಲಸಗಾರರ ಜೀವನದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರದ ದತ್ತಾಂಶದ ಪ್ರಕಾರ 3.5 ಮಿಲಿಯನ್​ ಜನರ ಜೀವನ ಅಸ್ಸೋಂನ ಟೀ ಉದ್ಯಮದೊಂದಿಗೆ ಬೆಸೆದು ಕೊಂಡಿದೆ.

ಇದನ್ನೂ ಓದಿ: ಸಾಲ ಪಡೆಯುವಲ್ಲಿ ಅಸ್ಸೋಂ ಸರ್ಕಾರದ ದಾಖಲೆ: ಇಂದು ಅಸ್ಸೋಂಗೆ ಪ್ರಧಾನಿ ಮೋದಿ ಭೇಟಿ

ABOUT THE AUTHOR

...view details