ಕರ್ನಾಟಕ

karnataka

ಭೀಕರ ರಸ್ತೆ ಅಪಘಾತ.. ಆರು ಜನ ದುರ್ಮರಣ, ದೇಹಗಳೆಲ್ಲ ಛಿದ್ರ ಛಿದ್ರ!

ಜೈಪುರ-ಜೋಧ್​ಪುರ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ.

By

Published : Jul 5, 2021, 8:12 AM IST

Published : Jul 5, 2021, 8:12 AM IST

ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ

ರಾಜಸ್ಥಾನ: ಜೈಪುರ-ಜೋಧ್​ಪುರ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಶಾಲೆಯೊಂದಕ್ಕೆ ನುಗ್ಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಮೃತರೆಲ್ಲರೂ ಸದರ್​ ಪೊಲೀಸ್ ಠಾಣಾ ವ್ಯಾಪ್ತಿಯ ಲಂಡರಿ ಮಾಲ್ಗಾಂವ್ ನಿವಾಸಿಗಳಾಗಿದ್ದಾರೆ. ಸುಮೇರ್ ಸಿಂಗ್ (21) ರಾವತ್​ರಾಮ್ (20), ಮನೋಹರ್ (21), ಜಿತೇಂದ್ರ (21), ಚಂದನ್ ಸಿಂಗ್ (22), ರಾಜೇಶ್ (22) ಮತ್ತು ಸಿಕಂದರ್ ಮೃತ ದುರ್ದೈವಿಗಳಾಗಿದ್ದಾರೆ.

ಸ್ಥಳಕ್ಕೆ ಡಂಗಿಯಾವಸ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿಯಾದ ವೇಗವೇ ಘಟನೆಗೆ ಕಾರಣ, ಮೃತದೇಹಗಳೆಲ್ಲವೂ ಛಿದ್ರ ಛಿದ್ರವಾಗಿದ್ದರಿಂದ ದೇಹಗಳನ್ನು ಹೊರ ತೆಗೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವೃದ್ದೆಯಿಂದ ಬ್ಯಾಗ್​ ಕಸಿದು ಪರಾರಿಯಾದ ದುಷ್ಕರ್ಮಿ: ಘಟನೆಯ ವಿಡಿಯೋ

ABOUT THE AUTHOR

...view details