ಕರ್ನಾಟಕ

karnataka

ETV Bharat / bharat

ಉಸಿರಾಟ ತೊಂದರೆ: ಬೈಕ್​​ನಲ್ಲಿ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟ ವ್ಯಕ್ತಿ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಲು ಕರೆತರುವಾಗ ಬೈಕ್​ನಲ್ಲೇ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

By

Published : May 8, 2021, 6:04 PM IST

Body carried on two wheeler
ಉಸಿರಾಟದ ತೊಂದರೆಯಿಂದ ಮೃತಪಟ್ಟ ಚಿಕ್ಕಪ್ಪನ ಶವನನ್ನು ಬೈಕ್​ನಲ್ಲೇ ಸಾಗಿಸಿದ ಮಗ!

ಆಂಧ್ರಪ್ರದೇಶ: ಆಂಧ್ರದಲ್ಲಿ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಚಿಕ್ಕಪ್ಪನನ್ನು ಮಗ ಆಸ್ಪತ್ರೆಗೆ ಕರೆತರುತ್ತಿದ್ದಾಗ ಬೈಕ್​ನಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

63 ವರ್ಷದ ವೃದ್ಧ ರಾಮ್​​ ಬಾಬು ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೊರೊನಾ ಟೆಸ್ಟ್​ ಮಾಡಿಸಿದ್ದರೂ ವರದಿ ಬಂದಿರಲಿಲ್ಲ. ಈ ಮಧ್ಯೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ನರಸಿಂಹಲು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ.

ಬೈಕ್​ನಲ್ಲಿ ಕೂರಿಸಿಕೊಂಡು ಹೊರಟಾಗ ದಾರಿಯಲ್ಲೇ ರಾಮ್​ಬಾಬು ಮೃತಪಟ್ಟಿದ್ದಾರೆ. ಕೊರೊನಾ ಟೆಸ್ಟ್​ ಮಾಡಿಸಿದ್ದರೂ ವರದಿ ಬಂದಿಲ್ಲ. ಇದೇ ಸಾವಿಗೆ ಕಾರಣ ಎಂದು ಮಗ ನರಸಿಂಹಲು ದೂರಿದ್ದಾರೆ.

ABOUT THE AUTHOR

...view details