ಕರ್ನಾಟಕ

karnataka

ETV Bharat / bharat

ಕಪ್​​ನೊಂದಿಗೆ ಹಿಂದಿರುಗುವೆ ಎಂದಿದ್ದ ಕಬಡ್ಡಿ ಪಟು.. ಆಟ ಆಡುತ್ತಲೇ ಪ್ರಾಣಬಿಟ್ಟ

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಗಣ್ಣಪಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

By

Published : Jan 17, 2021, 2:22 PM IST

Young man dies while playing Kabaddi at kadapa in AP
ಕಬಡ್ಡಿ ಆಡುತ್ತಲೇ ಪ್ರಾಣಬಿಟ್ಟ ಯುವಕ

ಕಡಪ (ಆಂಧ್ರಪ್ರದೇಶ): ಕಬಡ್ಡಿ ಆಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಕಬಡ್ಡಿ ಆಡುತ್ತಲೇ ಪ್ರಾಣಬಿಟ್ಟ ಯುವಕ

ಚೆನ್ನೂರು ಮಂಡಲದ ಕೊಂಡಪೇಟ ನಿವಾಸಿ, ಎಂ.ಕಾಂ ಪದವೀಧರ ನರೇಂದ್ರ ಮೃತ ಯುವಕ. ಕಡಪ ಜಿಲ್ಲೆಯ ಗಂಗಣ್ಣಪಲ್ಲಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಆಟದ ವೇಳೆ ಎದುರಾಳಿ ತಂಡದ ಸದಸ್ಯರು ನರೇಂದ್ರನನ್ನು ಹಿಡಿದು ಬೀಳಿಸಿ ಔಟ್​ ಮಾಡಿದ್ದರು. ಆದರೆ ಆತ ಎದ್ದು ನಿಂತು ಹಿಂದಿರುಗಿ ಹೋಗಲು ಎರಡು ಹೆಜ್ಜೆ ಮುಂದಿಟ್ಟ ಕೂಡಲೇ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ನರೇಂದ್ರ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ರಸ್ತೆ ದಾಟುವ ವೇಳೆ ಲಾರಿ ಗುದ್ದಿ 40 ವರ್ಷದ ಗಜರಾಜ ಸಾವು

"ನಾನು ಸ್ಪರ್ಧೆಯಲ್ಲಿ ಗೆದ್ದು ಕಪ್​​ನೊಂದಿಗೆ ಮನೆಗೆ ಮರಳುತ್ತೇನೆ" ಎಂದು ನರೇಂದ್ರ ಹೇಳಿದ್ದ ಕೊನೆಯ ಮಾತನ್ನು ಆತನ ತಾಯಿ ನೆನೆದು ಕಣ್ಣೀರಿಡುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details