ಮೈನಾಗುರಿ (ಪಶ್ಚಿಮ ಬಂಗಾಳ): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಆರೋಪ, ಪ್ರತ್ಯಾರೋಪಗಳು ತೀವ್ರಗೊಂಡಿವೆ.
ಟಿಎಂಸಿ ಕಾರ್ಯಕರ್ತನ ಬರ್ಬರ ಹತ್ಯೆ: ಬಿಜೆಪಿ ವಿರುದ್ಧ ಆರೋಪ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಸಮರ ಮುಂದುವರಿದಿದೆ. ಮೈನಾಗುರಿಯಲ್ಲಿ ನಡೆದ ಟಿಎಂಸಿ ಕಾರ್ಯಕರ್ತನ ಹತ್ಯೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
Published : Jan 18, 2021, 12:21 PM IST
Published : Jan 18, 2021, 12:21 PM IST
|Updated : Jan 18, 2021, 1:48 PM IST
ನಿನ್ನೆ ತಡರಾತ್ರಿ ಟಿಎಂಸಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಮೈನಾಗುರಿಯಲ್ಲಿ ನಡೆದಿದೆ. ಟಿಎಂಸಿ ಸಭೆ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ, ದಾಳಿ ನಡೆಸಿದ ಕಿಡಿಗೇಡಿಗಳ ತಂಡ ರಂಜಿತ್ ಅಧಿಕಾರಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಕಾರ್ಯಕರ್ತರು, ಈ ಘಟನೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಆರೋಪದ ಕುರಿತು ಮಾತನಾಡಿರುವ ಬಿಜೆಪಿ, ಈ ಹತ್ಯೆಗೆ ಟಿಎಂಸಿ ಆಂತರಿಕ ಘರ್ಷಣೆಯೇ ಕಾರಣ ಎಂದಿದೆ.