ಕರ್ನಾಟಕ

karnataka

By

Published : Aug 18, 2019, 5:12 PM IST

ETV Bharat / bharat

ತಾಯಿ ಮೇಲಿನ ಪ್ರೀತಿ.. ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಅಳಿಯ!

ತಾಯಿ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್​ನನ್ನು ಅಳಿಯನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಅಳಿಯ

ಪೂರ್ವಗೋದಾವರಿ: ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ದೆಂದುಲೂರಿನಲ್ಲಿ ನಡೆದಿದೆ.

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ರೌಡಿಶೀಟರ್​ ಪದ್ದಲವು ಅನೀಷ್​ (27) ಕೊಲೆಯಾದವ. ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಕಾಶ್​ನಗರ ಗ್ರಾಮಕ್ಕೆ ಸೋದರತ್ತೆಯನ್ನು ನೋಡಲು ಅನೀಷ್​ ಬಂದಿದ್ದ. ಈತ ಶನಿವಾರ ಮದ್ಯ ಸೇವಿಸಿ ಸೋದರ ಅತ್ತೆಯೊಡನೆ ಜಗಳವಾಡಿ ಹಲ್ಲೆ ಮಾಡಿ ಹೊರಗಡೆ ಹೋಗಿದ್ದಾನೆ.

ಈ ಸುದ್ದಿ ಸೋದರ ಅತ್ತೆಯ ಮಗ ಕೊಗಟ್ಟು ಪ್ರಕಾಶ್‌ಗೆ ತಿಳಿದಿದೆ. ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದರಿಂದ ಮಾವನ ವಿರುದ್ಧ ಆಕ್ರೋಶಗೊಂಡಿದ್ದಾನೆ. ಅನೀಷ್ ಮನೆಗೆ ಬಂದಾಗ ಪ್ರಕಾಶ್​ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಅನೀಷ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details