ಕರ್ನಾಟಕ

karnataka

By

Published : Oct 1, 2020, 4:57 PM IST

ETV Bharat / bharat

ಗುಂಡಿನ ದಾಳಿಯಲ್ಲಿ ಲ್ಯಾನ್ಸ್​ ನಾಯಕ ಹುತಾತ್ಮ: 50 ಲಕ್ಷ ರೂ, ಸರ್ಕಾರಿ ನೌಕರಿ ಘೋಷಣೆ

ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಪಾಕ್​ನಿಂದ ನಡೆದ ಗುಂಡಿನ ದಾಳಿ ವೇಳೆ ಲ್ಯಾನ್ಸ್​ ನಾಯಕ ಹುತಾತ್ಮರಾಗಿದ್ದು, ಪಂಜಾಬ್​ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ.

LANCE NAIK KARNAIL SINGH
LANCE NAIK KARNAIL SINGH

ಚಂಡೀಗಢ:ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಪಾಕ್​ ನಡೆಸಿರುವ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಲ್ಯಾನ್ಸ್​ ನಾಯಕ ಕರ್ನೈಲ್​​​ ಸಿಂಗ್ ಹುತಾತ್ಮರಾಗಿದ್ದಾರೆ.

ಪಂಜಾಬ್​ನ ಸಂಗೂರ್​​ನವರಾಗಿರುವ ಕರ್ನೈಲ್​​​​ ಸಿಂಗ್​​(10 JAK RIF ) ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇಂದು ಬೆಳಗ್ಗೆ ನಡೆದ ಗುಂಡಿನ ದಾಳಿ ವೇಳೆ ಹುತಾತ್ಮರಾಗಿದ್ದಾರೆ.

ಗಡಿಯಲ್ಲಿ ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಮೂವರು ಯೋಧರು ಹುತಾತ್ಮ, ಐವರಿಗೆ ಗಾಯ!

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಂಜಾಬ್​ ಸಿಎಂ ಅಮರೀದರ್​ ಸಿಂಗ್​, ಹುತಾತ್ಮ ಯೋಧನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ತಿಳಿಸಿದ್ದಾರೆ. ಇವರಿಗೆ ಪತ್ನಿ ಹಾಗೂ ಒಂದು ವರ್ಷದ ಮಗುವಿದೆ.

ABOUT THE AUTHOR

...view details