ನವದೆಹಲಿ :ಕೋವಿಡ್ ನಿಯಂತ್ರಿಸುವಲ್ಲಿ ಪಶ್ಮಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಸಹಕರಿಸಲು ಲಾಕ್ ಡೌನ್ ಉಲ್ಲಂಘಿಸಿ ಸರಕು ಸಾಗಾಟ ವಿಮಾನದಲ್ಲಿ ಕೊಲ್ಕತ್ತಾಗೆ ತೆರಳಿದ್ದಾರೆ ಎಂಬ ಆರೋಪವನ್ನು ರಾಜಕೀಯ ತಂತ್ರಜ್ಞ ಮತ್ತು ಮಾಜಿ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ನಿರಾಕರಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಆಧಾರರಹಿತ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ನಾನು ಕೊಲ್ಕತ್ತಾಗೆ ಹೋಗಿಲ್ಲ ಮತ್ತು ಯಾವುದೇ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿ ಎಂದಿದ್ದಾರೆ.