ಕರ್ನಾಟಕ

karnataka

ಕೋರ್ಟ್​ನಲ್ಲಿ ತೀವ್ರ ಮುಜುಗರ: ದಂಡ ಸಹಿತ ಆಸ್ತಿ ತೆರಿಗೆ ಪಾವತಿ ಮಾಡಿದ ಸೂಪರ್​ ಸ್ಟಾರ್​ ರಜನಿ!

ಕಲ್ಯಾಣ ಮಂಟಪ ತೆರಿಗೆ ವಿಚಾರವಾಗಿ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ದ ಸೂಪರ್​ ಸ್ಟಾರ್​​ ರಜನಿಕಾಂತ್​ಗೆ ಇದೀಗ ತೀವ್ರ ಮುಖಭಂಗವಾಗಿದೆ.

By

Published : Oct 15, 2020, 4:43 PM IST

Published : Oct 15, 2020, 4:43 PM IST

Actor Rajinikanth
Actor Rajinikanth

ಚೆನ್ನೈ:ತಮ್ಮ ಒಡೆತದನ ಕಲ್ಯಾಣ ಮಂಟಪದ ಆಸ್ತಿ ತೆರಿಗೆ ವಿಚಾರವಾಗಿ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ದ ಸೂಪರ್​​ ಸ್ಟಾರ್ ರಜನಿಕಾಂತ್​​ಗೆ ಹಿನ್ನಡೆಯಾಗಿದ್ದು, ಈ ಮೂಲಕ ತೀವ್ರ ಮುಜುಗರ ಅನುಭವಿಸಿದ್ದಾರೆ.

ಶ್ರೀ ರಾಘವೇಂದ್ರ ಹೆಸರಿನ ಕಲ್ಯಾಣ ಮಂಟಪದ 6.50 ಲಕ್ಷ ರೂ. ತೆರಿಗೆ ಕಟ್ಟುವಂತೆ ಚೆನ್ನೈ ಮಹಾನಗರ ಪಾಲಿಕೆ ನೋಟಿಸ್​ ಜಾರಿ ಮಾಡಿತ್ತು. ಆದರೆ, ಇದನ್ನ ಪ್ರಶ್ನೆ ಮಾಡಿ ರಜನಿಕಾಂತ್​​​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್​​, ಇದು ಸಮಯ ಹಾಳುಮಾಡುವಂತಹದ್ದು, ಬೇಗ ತೆರಿಗೆ ಕಟ್ಟುವಂತೆ ಆದೇಶ ನೀಡಿದೆ. ಇದರಲ್ಲಿ ವಿಳಂಬ ಮಾಡಿದ್ರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ನಟ ದಂಡ ಸಹಿತವಾಗಿ ತೆರಿಗೆ ಪಾವತಿ ಮಾಡಿದ್ದಾಗಿ ತಿಳಿದು ಬಂದಿದೆ.

ಏನಿದು ವಿವಾದ!?

ದೇಶಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ರಜನಿಕಾಂತ್​ ಒಡೆತದನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ 8 ತಿಂಗಳಿಂದ ಯಾವುದೇ ಮದುವೆ ಕಾರ್ಯಕ್ರಮ ನಡೆದಿಲ್ಲ. ಇದರ ಮಧ್ಯೆ ಚೆನ್ನೈ ಮಹಾನಗರ ಪಾಲಿಕೆ 6.50 ಲಕ್ಷ ರೂ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿತ್ತು. ಇದನ್ನ ಪ್ರಶ್ನೆ ಮಾಡಿ ರಜನಿ ಪರ ವಕೀಲರು ಮದ್ರಾಸ್​ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಜತೆಗೆ ನಾವು ಫೆಬ್ರವರಿ ತಿಂಗಳವರೆಗೆ ತೆರಿಗೆ ಪಾವತಿ ಮಾಡಿದ್ದು, ತದನಂತರ ನಮಗೆ ಯಾವುದೇ ಲಾಭ ಬರದ ಕಾರಣ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಜಾಗೊಂಡಿದ್ದು, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ರೆ ದಂಡ ವಿಧಿಸಲಾಗುವುದು ಎಂದಿದೆ.

ಇದೇ ವಿಚಾರವಾಗಿ ಟ್ವೀಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೂಪರ್ ಸ್ಟಾರ್​ ರಜನಿಕಾಂತ್​​ ಅನುಭವ ಎಂಬುದು ಪಾಠವಿದ್ದಂತೆ ಎಂದಿದ್ದಾರೆ.

ABOUT THE AUTHOR

...view details