ಕರ್ನಾಟಕ

karnataka

ETV Bharat / bharat

'ದೇವರು ನಿಮ್ಮನ್ನು ಕ್ಷಮಿಸಿಯಾನೇ!'... ಬಿಜೆಪಿಗೆ ಚುಚ್ಚಿದ ರೆಬಲ್​

ಬಿಜೆಪಿ ಹಿರಿಯ ನಾಯಕ ಎಲ್ ​ಕೆ ಅಡ್ವಾಣಿ ಪರವಾಗಿ ಮಾತನಾಡಿರುವ ಸಂಸದ ಶತ್ರುಘ್ನ ಸಿನ್ಹಾ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

By

Published : Mar 28, 2019, 10:11 AM IST

ಬಿಜೆಪಿ ವಿರುದ್ಧ ಮತ್ತೆ ಟ್ವೀಟರ್​ ಗರಂ ಆದ ಶತ್ರುಘ್ನ ಸಿನ್ಹಾ

ನವದೆಹಲಿ: ಪಕ್ಷದ ವಿರುದ್ಧವೇ ಸಿಡಿದೆದ್ದು, ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ, ನಟ ಶತ್ರುಘ್ನ ಸಿನ್ಹಾ ಮತ್ತೆ ಟ್ವಿಟ್ಟರ್​ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರಿಗೆ ಈ ಬಾರಿಯ ಲೋಕಸಭೆಯಲ್ಲಿ ಪಕ್ಷ ಟಿಕೆಟ್​ ನೀಡದ್ದಕ್ಕೆ ಈ ಮೊದಲು ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಅದೇ ವಿಚಾರವಾಗಿ 'ದೇವರು ನಿಮ್ಮನ್ನು ಕ್ಷಮಿಸಿಯಾನೇ!' ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿಗರಿಗೆ ಅಡ್ವಾಣಿ ತಂದೆ ಸಮಾನರು, ಆತ್ಮೀಯರು, ಮಾರ್ಗದರ್ಶಕರೂ ಆಗಿರುವ ಎಲ್​.ಕೆ. ಅಡ್ವಾಣಿ ಅವರ ಅನುಮತಿ ಪಡೆಯದೇ, ಅವರನ್ನು ಲೋಕಸಭೆ ಚುನಾವಣೆಯಿಂದ ನಿರ್ಗಮಿಸುವಂತೆ ಮಾಡಲಾಗಿದೆ ಎಂದು ದೂರಿದ್ದಾರೆ.

ಅಡ್ವಾಣಿ ಅವರ ರಾಜಕೀಯ ಜೀವನದಲ್ಲಿಯೇ ಈ ನಿರ್ಣಯ ತೀವ್ರ ಆಘಾತಕಾರಿಯಾದುದು. ನಿರಂಕುಶಾಧಿಕಾರದಲ್ಲಿ ಮಾತ್ರ ಇದು ಸಾಧ್ಯ. ಇದರಿಂದ ಎಲ್ಲರಿಗೂ ಬೇಸರ ಉಂಟಾಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಎಲ್​.ಕೆ. ಅಡ್ವಾಣಿ ಸೇರಿ ಮುರುಳಿ ಮನೋಹರ್​ ಜೋಶಿ, ಶಾಂತಕುಮಾರ್​ ಅವರಿಗೂ ಪಕ್ಷ ಹೀಗೆ ಮಾಡಿರುವುದು ಅಸಹನೀಯ. ಇದರಿಂದ ಜನರು ಕೋಪಗೊಂಡಿದ್ದಾರೆ ಎಂದು ಸಿನ್ಹಾ ಕುಟುಕಿದ್ದಾರೆ.

ನಮ್ಮ ಹಿರಿಯರಿಗೆ ಮಾಡಿದ ಅನ್ಯಾಯಕ್ಕೆ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ಸಿಗಲಿದೆ. ದೇವರು ನಿಮ್ಮನ್ನು ಕ್ಷಮಿಸಿಯಾನೇ! ಎಂದೂ ಸಂಸದ ಛೇಡಿಸಿದ್ದಾರೆ.


ABOUT THE AUTHOR

...view details