ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಎಲ್ಲ ವಲಯಗಳ ಮೇಲೂ ತನ್ನ ಪ್ರಭಾವ ಬೀರಿದ್ದು, ಇದೀಗ ನೌಕರರ ಭವಿಷ್ಯ ನಿಧಿ ಮೇಲೂ ಇದರ ಕರಿಛಾಯೆ ಮೂಡಿದೆ. ಹೀಗಾಗಿ ಎರಡು ಕಂತುಗಳಲ್ಲಿ ಬಡ್ಡಿ ದರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ನೌಕರರ ಭವಿಷ್ಯ ನಿಧಿ ಮೇಲೂ ಕೊರೊನಾ ಕರಿಛಾಯೆ: ಎರಡು ಕಂತುಗಳಲ್ಲಿ ಬಡ್ಡಿ ನೀಡಲು ನಿರ್ಧಾರ!
ಮಹಾಮಾರಿ ಕೊರೊನಾ ವೈರಸ್ ನೌಕರರ ಭವಿಷ್ಯ ನಿಧಿ ಮೇಲೂ ಕೆಟ್ಟ ಪರಿಣಾಮ ಬೀರಿದ್ದು,ಹೀಗಾಗಿ ಎರಡು ಕಂತುಗಳಲ್ಲಿ ಬಡ್ಡಿ ದರ ನೀಡಲು ನಿರ್ಧರಿಸಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಐ)2019-20 ಹಣಕಾಸು ವರ್ಷದಲ್ಲಿ ಶೇ.8.5ರಷ್ಟು ಬಡ್ಡಿ ಪಾವತಿಯನ್ನ ಶೇ. 8.15 ಹಾಗೂ ಶೇ.0.35 ಎರಡು ಪ್ರತ್ಯೇಕ ಕಂತುಗಳಲ್ಲಿ ಪಾವತಿ ಮಾಡಲು ನಿರ್ಧರಿಸಲಾಗಿದೆ.ಶೇ. 0.35 ಬಡ್ಡಿ ಹಣವನ್ನು ಡಿಸೆಂಬರ್ನಲ್ಲಿ ಪಾವತಿಸಲಾಗುವುದು ಎಂದು ತಿಳಿಸಿದೆ. ಮಹಾಮಾರಿ ಕೊರೊನಾ ವೈರಸ್ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಬಡ್ಡಿಗೆ ಕತ್ತರಿ ಹಾಕದಿರಲು ಸರ್ಕಾರ ನಿರ್ಧರಿಸಿದೆ.
ಶೇ. 8.5ರ ಬಡ್ಡಿದರ 7 ವರ್ಷದ ಕನಿಷ್ಠ ಬಡ್ಡಿದರವಾಗಿದೆ. ಕಳೆದ ಮಾರ್ಚ್ನ ಮೊದಲ ವಾರದಲ್ಲಿ ಶೇ.8.5ರ ಬಡ್ಡಿ ದರವನ್ನು ಇಪಿಎಫ್ಒ ಘೋಷಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ಇಪಿಎಫ್ಒ ತನ್ನ ಚಂದಾದಾರರಿಗೆ ಶೇ.8.65ರಷ್ಟು ಆದಾಯ ನೀಡಿತ್ತು.