ಕರ್ನಾಟಕ

karnataka

By

Published : Aug 24, 2020, 12:07 PM IST

Updated : Aug 24, 2020, 5:58 PM IST

ETV Bharat / bharat

ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ: CWC ಸಭೆಯಲ್ಲಿ ನಿರ್ಧಾರ

CWC meeting
ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ

17:54 August 24

ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ: CWC ಸಭೆಯಲ್ಲಿ ನಿರ್ಧಾರ

  • ಕಾಂಗ್ರೆಸ್​ ಪಕ್ಷದ ನಾಯಕತ್ವ ವಿಚಾರದ ಗೊಂದಲಕ್ಕೆ ತೆರೆ
  • ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ
  • ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ವರೆಗೆ ಸೋನಿಯಾ ಪಕ್ಷದ ಮುಖ್ಯಸ್ಥರಾಗಿರಲಿದ್ದಾರೆ
  • ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

17:25 August 24

ಸೋನಿಯಾ - ರಾಹುಲ್ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ : ಕೈ ನಾಯಕರು

  • ಪಕ್ಷದಲ್ಲಿ ಸುಧಾರಣೆ ತರಲು ಸಲಹೆಗಳನ್ನು ನೀಡಿ ನಾವು ಪತ್ರ ಬರೆದದ್ದು ಅಷ್ಟೇ
  • ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ
  • CWC ಸಭೆಯಲ್ಲಿ ಕಾಂಗ್ರೆಸ್​ ನಾಯಕರ ಹೇಳಿಕೆ

16:05 August 24

ರಿವರ್ಸ್​ ಹೊಡೆದ ಗುಲಾಮ್​​​ ನಬಿ ಆಜಾದ್​

  • ಪತ್ರ ಬರೆದ ಕಾಂಗ್ರೆಸ್​ ನಾಯಕರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿಲ್ಲ
  • ಕಾರ್ಯಕಾರಿ ಸಮಿತಿಯಲ್ಲಾಗಲಿ, ಹೊರಗಡೆಯಾಗಲಿ ರಾಗಾ ಹಾಗೆ ಆರೋಪ ಮಾಡಿಲ್ಲ
  • ಗುಲಾಮ್​ ನಬಿ ಆಜಾದ್​ ಹೇಳಿಕೆ
  • ಈ ಹಿಂದೆ ರಾಹುಲ್​ ಆರೋಪ ನಿಜವಾದರೆ ರಾಜೀನಾಮೆ ನೀಡುವೆ ಎಂದಿದ್ದ ಆಜಾದ್​

15:18 August 24

ಕಾಂಗ್ರೆಸ್​ ಕಥೆ ಮುಗಿಯಿತು: ಉಮಾ ಭಾರತಿ

  • ಗಾಂಧಿ-ನೆಹರೂ ಕುಟುಂಬದ ಅಸ್ತಿತ್ವ ಬಿಕ್ಕಟ್ಟಿನಲ್ಲಿದೆ
  • ಅವರ ರಾಜಕೀಯ ಪ್ರಾಬಲ್ಯ ಮುಗಿದಿದೆ, ಕಾಂಗ್ರೆಸ್​ ಕಥೆ ಮುಗಿಯಿತು
  • ಯಾರು ಈಗ ಯಾವ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬುದು ಈಗ ಮುಖ್ಯವಲ್ಲ
  • ಕಾಂಗ್ರೆಸ್ ಪಕ್ಷ ಯಾವುದೇ ವಿದೇಶಿ ಅಂಶಗಳಿಲ್ಲದೆ ನಿಜವಾದ 'ಸ್ವದೇಶಿ' ಗಾಂಧಿ ತತ್ವಗಳಿಗೆ ಮರಳಬೇಕು
  • ಮಾಧ್ಯಮಗಳಿಗೆ ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿಕೆ

15:12 August 24

ಕಾಂಗ್ರೆಸ್​​ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ: ಶಿವರಾಜ್​ ಸಿಂಗ್​ ಚೌಹಾಣ್​

  • ಜ್ಯೋತಿರಾಧಿತ್ಯ ಸಿಂಧಿಯಾ ತಿರುಗಿಬಿದ್ದಾಗ ಕೂಡ ಅವರ ವಿರುದ್ಧ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿತ್ತು
  • ಇದೀಗ ಗುಲಾಮ್ ನಬಿ ಆಜಾದ್ ಮತ್ತು ಕಪಿಲ್ ಸಿಬಲ್​ರಂತಹ ನಾಯಕರು ಪಕ್ಷದ ಪೂರ್ಣಾವಧಿ ನಾಯಕತ್ವಕ್ಕೆ ಒತ್ತಾಯಿಸುತ್ತಿರುವಾಗ ಕೂಡ ಇದೇ ಆರೋಪ ಮಾಡಲಾಗಿದೆ
  • ಇಂತಹ ಪಕ್ಷವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ
  • ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಹೇಳಿಕೆ

14:17 August 24

ಕಪಿಲ್​ ಸಿಬಲ್​ ಟ್ವೀಟ್​ ಡಿಲೀಟ್​...

  • ರಾಗಾ ಆರೋಪ ಖಂಡಿಸಿ ಮಾಡಿದ್ದ ಟ್ವೀಟ್​ ಡಿಲೀಟ್​ ಮಾಡಿದ ಕಪಿಲ್​ ಸಿಬಲ್
  • ನಿಮ್ಮ ವಿರುದ್ಧ ಆರೋಪ ಮಾಡಿದ್ದಲ್ಲ ಎಂದು ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ತಿಳಿಸಿದ್ದಾರೆ
  • ಹೀಗಾಗಿ ನಾನು ನನ್ನ ಟ್ವೀಟ್ ಅನ್ನು ಹಿಂತೆಗೆದುಕೊಂಡಿದ್ದೇನೆ ಎಂದು ಮತ್ತೆ ಟ್ವೀಟ್​ ಮಾಡಿ ಕಪಿಲ್​ ಸ್ಪಷ್ಟನೆ

14:10 August 24

ರಾಹುಲ್​ ಆರೋಪಕ್ಕೆ ಸಂಜಯ್​ ಝಾ ತಿರುಗೇಟು

  • ಬಿಜೆಪಿಯೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ರಾಗಾ ಹೇಳಿದ್ದಾರೆ
  • ಬಿಜೆಪಿಯೊಂದಿಗೆ ನಾವು ಕೈ ಜೋಡಿಸುವುದು ಬೋರಿಸ್ ಜಾನ್ಸನ್ ಅವರು ಫೇರ್‌ನೆಸ್ ಕ್ರೀಮ್ ಬಳಸಿದಂತೆ
  • ಸಂಜಯ್​ ಝಾ ಟ್ವೀಟ್​

13:59 August 24

ರಾಹುಲ್​ ಜೀ ತಪ್ಪು ಮಾಡಿದ್ದಾರೆ: ರಮ್ಯಾ

  • ನನ್ನ ಪ್ರಕಾರ ರಾಹುಲ್​ ಜೀ ತಪ್ಪು ಮಾಡಿದ್ದಾರೆ
  • ಬಿಜೆಪಿಯೊಂದಿಗೆ ಕೈ ಮುಖಂಡರು ಕೈ ಜೋಡಿಸಿದ್ದಾರೆ ಎಂದು ಅವರು ಹೇಳುವ ಬದಲು
  • ಬಿಜೆಪಿ ಮತ್ತು ಮಾಧ್ಯಮಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಹೇಳಬೇಕಿತ್ತು
  • ಮಾಜಿ ಕಾಂಗ್ರೆಸ್​ ಸಂಸದೆ ರಮ್ಯಾ ಟ್ವೀಟ್

13:48 August 24

ಟ್ವೀಟರ್​ನಲ್ಲಿ ರಮ್ಯಾ ಗರಂ

  • ಕೈ ಮುಖಂಡರು ಕೇವಲ ಪತ್ರವನ್ನ ಮಾತ್ರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ
  • CWC ಸಭೆಯಲ್ಲಿ ನಡೆಯುತ್ತಿರುವ ನಿಮಿಷ-ನಿಮಿಷದ ಸಂಭಾಷಣೆಯನ್ನೂ ಬಹಿರಂಗಪಡಿಸುತ್ತಿದ್ದಾರೆ
  • ಟ್ವಿಟರ್​ ಮೂಲಕ ಮಾಜಿ ಕಾಂಗ್ರೆಸ್​ ಸಂಸದೆ ರಮ್ಯಾ(ದಿವ್ಯಾ ಸ್ಪಂದನ)  ಆರೋಪ

13:18 August 24

ರಾಗಾ ಆರೋಪ ಖಂಡಿಸಿದ ಕಪಿಲ್​ ಸಿಬಲ್​

  • ಕಳೆದ 30 ವರ್ಷದಲ್ಲಿ ಬಿಜೆಪಿ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ
  • ಆದರೂ ರಾಹುಲ್​ ಗಾಂಧಿ ಹೀಗೆ ಆರೋಪ ಮಾಡಿದ್ದಾರೆ
  • ಕಪಿಲ್​ ಸಿಬಲ್​ ಟ್ವೀಟ್​

13:12 August 24

ರಾಗಾ ಆರೋಪ ನಿಜವಾದರೆ ರಾಜೀನಾಮೆ ನೀಡುವೆ: ಗುಲಾಮ್​ ನಬಿ ಆಜಾದ್​

  • ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪ
  • ರಾಗಾ ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ ಎಂದ ಗುಲಾಮ್​ ನಬಿ ಆಜಾದ್​

13:08 August 24

ನಮ್ಮ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ: ರಾಗಾ

  • ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ
  • ಸಭೆಯಲ್ಲಿ ರಾಗಾ ಆರೋಪ

12:48 August 24

ಕಾಂಗ್ರೆಸ್ ನಾಯಕರ ಪತ್ರಕ್ಕೆ ರಾಗಾ ಆಕ್ಷೇಪ

  • ಪೂರ್ಣಾವಧಿ ನಾಯಕತ್ವಕ್ಕೆ ಆಗ್ರಹಿಸಿ ಬರೆದ ಹಿರಿಯ ನಾಯಕರ ಪತ್ರಕ್ಕೆ ರಾಹುಲ್​ ಗಾಂಧಿ ಆಕ್ಷೇಪ
  • ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ
  • ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿರುವಾಗ ಏಕೆ ಪತ್ರ ಬರೆದಿದ್ದೀರಾ?
  • ಸಭೆಯಲ್ಲಿ ರಾಗಾ ಪ್ರಶ್ನೆ

12:42 August 24

ಸೋನಿಯಾ ಬಿಟ್ಟರೆ ರಾಹುಲ್ ಅಧ್ಯಕ್ಷರಾಗುವಂತೆ APCC ಮನವಿ

  • ಬಲವಾದ ನಾಯಕತ್ವವನ್ನು ನೀಡಲು ಕಾಂಗ್ರೆಸ್‌ನಲ್ಲಿ ಬೇರೆ ನಾಯಕರು ಇಲ್ಲ
  • ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯಲಿ
  • ಒಂದು ವೇಳೆ ಸೋನಿಯಾ ಮನಸ್ಸು ಬದಲಿಸಿದರೆ, ರಾಹುಲ್ ಗಾಂಧಿ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು
  • ಸಭೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (APCC) ಮನವಿ

12:26 August 24

ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಿ: ಸೋನಿಯಾ

  • ಪಕ್ಷಕ್ಕೆ ನೂತನ ಸಾರಥಿಯನ್ನು ಆಯ್ಕೆ ಮಾಡಿ ಎಂದ ಸೋನಿಯಾ ಗಾಂಧಿ
  • ಪೂರ್ಣಾವಧಿ ನಾಯಕತ್ವಕ್ಕೆ ಆಗ್ರಹಿಸಿದ ಹಿರಿಯ ನಾಯಕರಿಗೆ ಸೋನಿಯಾ ಪತ್ರ
  • ಸಭೆಯಲ್ಲಿ ಸೋನಿಯಾ ಬರೆದ ಪತ್ರ ಓದಿದ ಕೆ ಸಿ ವೇಣುಗೋಪಾಲ್​
  • ಪತ್ರದಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿರುವ ಕೈ ನಾಯಕಿ
  • ಕಾಂಗ್ರೆಸ್​ಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಿ ಎಂದು ಉಲ್ಲೇಖ

12:16 August 24

ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಮುಂದುವರೆಯುವಂತೆ ಮನಮೋಹನ್ ಸಿಂಗ್ ಒತ್ತಾಯ

  • ಸಭೆಯಲ್ಲಿ ಪಕ್ಷದ ನಾಯಕತ್ವ ಸ್ಥಾನದ ಕುರಿತ ಚರ್ಚೆ ಆರಂಭ
  • ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯುವಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ರಕ್ಷಣಾ ಸಚಿವ ಎ ಕೆ ಆಂಟೋನಿ ಒತ್ತಾಯ

12:09 August 24

ಸೋನಿಯಾ ಗಾಂಧಿ ನೇತೃತ್ವದಲ್ಲಿ CWC ವರ್ಚುವಲ್ ಸಭೆ ಆರಂಭ

  • ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಆರಂಭ
  • ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ
  • ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ ವಾದ್ರಾ, ಅಮರಿಂದರ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿ

11:52 August 24

ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ

ನವದೆಹಲಿ:ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. ಮುಖಂಡರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್​ನ 23 ನಾಯಕರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ, ಪರಿಣಾಮಕಾರಿ ನಾಯಕತ್ವ ಹಾಗೂ ಸುಧಾರಣೆಗಳ ಅಗತ್ಯವಿದೆ ಎಂದು ಉಲ್ಲೇಖಿಸಿ, ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.

ಕಾಂಗ್ರೆಸ್​ ಹಿರಿಯ ನಾಯಕರ ಮನವಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನೂತನ ಅಧ್ಯಕ್ಷರನ್ನು ಹುಡುಕಿಕೊಡಿ ಎಂದು ಕೇಳಿದ್ದರು. ಈ ಮೂಲಕ ಸೋನಿಯಾ ಗಾಂಧಿ ತಮ್ಮ ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ನಡೆಯುತ್ತಿರುವ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (CWC) ಸಭೆ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷಕ್ಕೆ ನೂತನ ಸಾರಥಿ ಆಯ್ಕೆಯಾಗುವ ಸಾಧ್ಯತೆಯಿದೆ.  

Last Updated : Aug 24, 2020, 5:58 PM IST

ABOUT THE AUTHOR

...view details