ಕರ್ನಾಟಕ

karnataka

By

Published : Apr 20, 2020, 5:28 PM IST

ETV Bharat / bharat

ಆರೋಗ್ಯ ರಕ್ಷಣೆಗಾಗಿ ಪ್ರತ್ಯೇಕ ಬಜೆಟ್​ ಮಂಡಿಸಲು ಕಮಲ್ ಹಾಸನ್ ಒತ್ತಾಯ

ಭಾರತದಲ್ಲಿ ಸಾಂಕ್ರಾಮಿಕ ಸನ್ನದ್ಧತೆಯ ಬಜೆಟ್ ಜಾರಿಗೆ ತರುವ ಅಗತ್ಯವಿದೆ ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

kamal
kamal

ಚೆನ್ನೈ (ತಮಿಳುನಾಡು): ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೊರೊನಾ ನಂತರದ ಪ್ರಪಂಚದ ಕುರಿತು ಯೋಚಿಸಿ, ಅದಕ್ಕಾಗಿ ಹಲವಾರು ಕ್ರಮ ಕೈಗೊಳ್ಳುವುದರ ಜೊತೆಗೆ, ಸಾಂಕ್ರಾಮಿಕ ಸಿದ್ಧತಾ ಬಜೆಟ್ ತಯಾರಿಸುವಂತೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಹೊಂದಿಕೊಂಡು ಕೋವಿಡ್-19 ವಿರುದ್ಧ ಹೋರಾಡುತ್ತಿರುವುದು ಪ್ರಶಂಸಾದಾಯಕ ಎಂದು ಕಮಲ್ ಹಾಸನ್ ಟ್ವೀಟ್ ಮೂಲಕ ಹೇಳಿದ್ದಾರೆ.

ಭಾರತ ನಡೆಸಿದ ಕೊನೆಯ ಪೂರ್ಣ ಪ್ರಮಾಣದ ಯುದ್ಧವು ಸುಮಾರು ಅರ್ಧ ಶತಮಾನದ ಹಿಂದೆ ನಡೆದಿತ್ತು. ಆದರೆ ಕಳಪೆ ಆರೋಗ್ಯ ರಕ್ಷಣೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಪ್ರತಿದಿನ ಯುದ್ಧ ನಡೆಯುತ್ತಲೇ ಇದೆ ಎಂದರು.

ಆರೋಗ್ಯಕ್ಕೆ ಹೋಲಿಸಿದರೆ, ಭಾರತದಲ್ಲಿ ಡಿಫೆನ್ಸ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿ ಸಾಂಕ್ರಾಮಿಕ ಸನ್ನದ್ಧತೆಯ ಬಜೆಟ್ ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.

ABOUT THE AUTHOR

...view details