ನವದೆಹಲಿ:ವಿದ್ಯುತ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ದೆಹಲಿ ಹೈಕೋರ್ಟ್ ವಿಭಿನ್ನ ಶಿಕ್ಷೆ ನೀಡಿದೆ.
ವಿದ್ಯುತ್ ಕದ್ದ ಕಾರಣಕ್ಕೆ 50 ಗಿಡಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್ ಆರೋಪಿಗೆ ಸೂಚಿಸಿದ್ದು ಇದನ್ನು ಪೂರೈಸಲು ಒಂದು ತಿಂಗಳ ಗಡುವನ್ನೂ ಸಹ ಕೋರ್ಟ್ ನೀಡಿದೆ.
ನವದೆಹಲಿ:ವಿದ್ಯುತ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ದೆಹಲಿ ಹೈಕೋರ್ಟ್ ವಿಭಿನ್ನ ಶಿಕ್ಷೆ ನೀಡಿದೆ.
ವಿದ್ಯುತ್ ಕದ್ದ ಕಾರಣಕ್ಕೆ 50 ಗಿಡಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್ ಆರೋಪಿಗೆ ಸೂಚಿಸಿದ್ದು ಇದನ್ನು ಪೂರೈಸಲು ಒಂದು ತಿಂಗಳ ಗಡುವನ್ನೂ ಸಹ ಕೋರ್ಟ್ ನೀಡಿದೆ.
ಒಂದು ತಿಂಗಳ ಒಳಗಾಗಿ ಐವತ್ತು ಗಿಡಗಳನ್ನು ನೆಟ್ಟು ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ವಂದೇ ಮಾತರಂ ಮಾರ್ಗದಲ್ಲಿರುವ ಕೇಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಗೆ ಗಿಡ ನೆಡುವಂತೆ ಹೇಳಲಾಗಿದೆ.
ಆರೋಪಿ ವಿವಿಧ ಬಗೆಯ ಗಿಡಗಳನ್ನು ನೆಡಬೇಕಿದ್ದು ಯಾವೆಲ್ಲಾ ಗಿಡಗಳು ಉತ್ತಮ ಎಂದು ಆದೇಶ ಪ್ರತಿಯಲ್ಲಿ ಕೋರ್ಟ್ ಉಲ್ಲೇಖಿಸಿದೆ. ಹಲಸು, ಪಾಲಾಶ, ಟೀಕ್ವುಡ್ ಸೇರಿದಂತೆ ಕೆಲವು ಗಿಡಗಳನ್ನು ಹೆಸರಿಸಲಾಗಿದೆ.