ಕರ್ನಾಟಕ

karnataka

By

Published : Apr 21, 2020, 3:13 PM IST

ETV Bharat / bharat

ಇಂಟರ್​ನೆಟ್ ಸಂಪರ್ಕಕ್ಕಾಗಿ ಬೆಟ್ಟ ಹತ್ತುತ್ತಿರುವ ಜನ!:  ಈ ಕಾರಣಕ್ಕಾಗಿ ಇಂಥಾ ಸಾಹಸ

ಆಂಧ್ರಪ್ರದೇಶ ಸರ್ಕಾರದ ಕಲ್ಯಾಣ ಯೋಜನೆಗಳ ಫಲ ಪಡೆದುಕೊಳ್ಳಲು, ಉತ್ತಮ ಇಂಟರ್ನೆಟ್ ಸಂಪರ್ಕಕ್ಕಾಗಿ ಜನ ಬೆಟ್ಟ ಹತ್ತುವುದು ಅನಿವಾರ್ಯವಾಗಿದೆ.

andhra
andhra

ವಿಶಾಖಪಟ್ಟಣಂ (ಆಂಧ್ರಪ್ರದೇಶ):ವಿಶಾಖ ಏಜೆನ್ಸಿ ಪ್ರದೆಶದಲ್ಲಿ ನಾಗರಿಕರು ಆಂಧ್ರಪ್ರದೇಶ ಸರ್ಕಾರದ ಕಲ್ಯಾಣ ಯೋಜನೆಗಳ ಫಲ ಪಡೆದುಕೊಳ್ಳಲು ಬೆಟ್ಟ ಹತ್ತುವುದು ಅನಿವಾರ್ಯವಾಗಿದೆ.

ವಿಶಾಖಾ ಏಜೆನ್ಸಿಯ ಹಳ್ಳಿಯಾದ ಗೋಮಾಂಗಿಯಲ್ಲಿ ಯೋಜನೆಯ ಫಲಾನುಭವಿಗಳು ಬೆಟ್ಟ ಹತ್ತಿ ಬಂದು ತಮ್ಮ ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ.

ಆರ್ಥಿಕ ಪರಿಹಾರಕ್ಕಾಗಿ ಸರ್ಕಾರವು ಬಯೋಮೆಟ್ರಿಕ್ ವ್ಯವಸ್ಥೆ ರದ್ದುಗೊಳಿಸಿ, ಫೋಟೋ ಮೂಲಕ ಗುರುತಿಸುವ ವಿಧಾನ ಅಳವಡಿಸಿಕೊಂಡಿದ್ದರೂ, ಇದಕ್ಕೆ ಉತ್ತಮ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಫಲಾನುಭವಿಗಳ ಫೋಟೋ ಅಪ್ಲೋಡ್​ ಮಾಡಲು ಉತ್ತಮ ನೆಟ್​ವರ್ಕ್​ಗಾಗಿ ಬೆಟ್ಟ ಹತ್ತಲೇಬೇಕಿದೆ.

ಇದರ ಪರಿಣಾಮವಾಗಿ, ವಯಸ್ಸಾದವರು ಸೇರಿದಂತೆ ಫಲಾನುಭವಿಗಳು ಕಷ್ಟಪಟ್ಟು ಬೆಟ್ಟ ಏರಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯಲ್ಲೂ ಜನ ಗುಂಪು ಗುಂಪಾಗಿ ಬೆಟ್ಟ ಏರಿ ಬರುತ್ತಿದ್ದಾರೆ.

ABOUT THE AUTHOR

...view details