ಬರ್ಹಾನ್ಪುರ್ (ಮಧ್ಯಪ್ರದೇಶ): ಜಾತಿ ವ್ಯವಸ್ಥೆಯ ಬೇರು ಪ್ರಸ್ತುತ ಸಮಾಜದಲ್ಲಿ ಇನ್ನೂ ಆಳಕ್ಕಿಳಿಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಇಲ್ಲಿನ ಬಿರೋಡಾ ಗ್ರಾಮದಲ್ಲಿ ದೇವಸ್ಥಾನದ ಒಳ ಪ್ರವೇಶಿಸಲು ಮುಂದಾದ ದಲಿತ ವರನೊಬ್ಬನನ್ನು ಕೆಲವು ದುಷ್ಕರ್ಮಿಗಳು ತಡೆದು 'ನೀವು ಕೆಳಜಾತಿಯವರು ಒಳಹೋಗಬಾರದು' ಎಂದು ಹೇಳಿ ಹೊರಕಳುಹಿಸಿ ಅವಮಾನಿಸಿದ್ದಾರೆ.
ವರ ಸಂದೀಪ್ ಗವಾಲೆ ಮಾತನಾಡಿ, ದೇವಾಲಯದಲ್ಲಿ ವಿವಾಹವಾಗಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಂಡಿದ್ದೆವು. ಅದಕ್ಕಾಗಿ ಕುಟುಂಬಸಮೇತ ಇಲ್ಲಿಗೆ ಬಂದಿದ್ದೇವೆ. ಆದರೆ, ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದೇವಾಲಯದ ಗೇಟ್ಗಳನ್ನು ಮುಚ್ಚಿ ಬೀಗ ಹಾಕಿದರು. ಕೆಳಜಾತಿಯವರು ದೇವಸ್ಥಾನದ ಒಳಗೆ ಹೋಗಬಾರದು. ಮುಟ್ಟಾಗುತ್ತದೆ ಎಂದು ಅಡ್ಡಿಪಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.