ಗೋರಖ್ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವರಾತ್ರಿ ಹಬ್ಬದ ಪ್ರಯುಕ್ತ ಗೋರಖ್ಪುರದಲ್ಲಿ 'ಕನ್ಯಾ ಪೂಜೆ' ನೆರವೇರಿಸಿದ್ದಾರೆ.
ಸಿಎಂ ಯೋಗಿ ಮಕ್ಕಳ ಹಣೆಯ ಮೇಲೆ ತಿಲಕ್ ಹಚ್ಚಿ, ಕಾಲು ತೊಳೆದು, ಪ್ರತಿಯೊಬ್ಬರಿಗೂ ದುಪ್ಪಟ್ಟವನ್ನು ಉಡುಗೊರೆಯಾಗಿ ನೀಡಿದರು. 'ಕನ್ಯಾ ಪೂಜೆ' ನಂತರ ಆಹಾರ ಬಡಿಸಿದ್ದಾರೆ.
"ನವರಾತ್ರಿಯ ಶುಭ ಸಂದರ್ಭದಲ್ಲಿ, ವಿಧಿ ವಿಧಾನದ ಅನುಸಾರ ಕನ್ಯಾ ಪೂಜೆಯ ಪುಣ್ಯ ಕಾರ್ಯ ಸಂಪನ್ನವಾಯಿತು" ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.
ನವರಾತ್ರಿಯ 10ನೇ ದಿನವನ್ನು ದಸರಾ ಅಥವಾ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. 'ದುಷ್ಟ'ತೆ ವಿರುದ್ಧ ವಿಜಯದ ಸಂಕೇತವಾಗಿ ರಾವಣನ ಪ್ರತಿಮೆಗಳನ್ನು ತೆರೆದ ಮೈದಾನದಲ್ಲಿ ದಹನ ಮಾಡುವ ಮೂಲಕ ಇದನ್ನು ದೇಶಾದ್ಯಂತ ಬಹಳ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.