ಕರ್ನಾಟಕ

karnataka

ಸಿಂಗ್‌ v/s ಸಿಧು:ಪಂಜಾಬ್‌ನಲ್ಲಿ 'ಕೈ' ಕಲಿಗಳ ನಡುವೆ ಮುಸುಕಿನ ಗುದ್ದಾಟ!

ನವ​ಜ್ಯೋತ್​ ಸಿಂಗ್ ಸಿಧು ಅಸಂಬದ್ಧ ಹೇಳಿಕೆಗಳ ಮೂಲಕ ತಮಗೂ, ಕಾಂಗ್ರೆಸ್​ ಪಕ್ಷಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಅಮರಿಂದರ್​ ಸಿಂಗ್ ಟೀಕಿಸಿದರು.

By

Published : May 19, 2019, 5:16 PM IST

Published : May 19, 2019, 5:16 PM IST

ಅಮರಿಂದರ್​ ಸಿಂಗ್

ಚಂಡೀಗಢ:ಪಂಜಾಬ್​ನಲ್ಲಿ ಲೋಕಸಭೆ ಚುನಾವಣೆಯ ಮತದಾನದ ದಿನವೇ ಕಾಂಗ್ರೆಸ್​ ನಾಯಕರಿಬ್ಬರ ಕಿತ್ತಾಟ ಬಹಿರಂಗಗೊಂಡಿದೆ. ಸಚಿವ ನವ​ಜ್ಯೋತ್​ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿದ್ದಾರೆ ಎಂದು ಸಿಎಂ ಅಮರಿಂದರ್​ ಸಿಂಗ್ ಹೇಳಿದರು.

ಮತದಾನದ ಬಳಿಕ ಮಾತನಾಡಿದ ಸಿಂಗ್, ಸಿಧು ಅಸಂಬದ್ಧ ಹೇಳಿಕೆಗಳ ಮೂಲಕ ತಮಗೂ, ಕಾಂಗ್ರೆಸ್​ ಪಕ್ಷಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದೂ ಟೀಕಿಸಿದರು.

ನನ್ನ ಸಿಧು ನಡುವೆ ವಾಕ್ಸಮರ ನಡೆಯುತ್ತಿಲ್ಲ.ಆತ ಮಹತ್ವಾಕಾಂಕ್ಷಿ.ಜನರೂ ಮಹತ್ವಾಕಾಂಕ್ಷಿಗಳೇ ಆಗಿದ್ದಾರೆ. ಚಿಕ್ಕಂದಿನಿಂದಲೂ ಸಿಧುವನ್ನು ನೋಡುತ್ತಾ ಬಂದಿದ್ದೇನೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ಬಹುಶಃ ಸಿಧು ನನ್ನ ಬದಲು ಮುಂದೆ ರಾಜ್ಯದ ಸಿಎಂ ಆಗಲು ಬಯಸುತ್ತಿದ್ದಾರೆ. ಅದು ಅವರ ಉದ್ದೇಶ ಎಂದು ಸಿಂಗ್ ಹೇಳಿದ್ದಾರೆ.

ತಮ್ಮ ಪತ್ನಿ ನವಜ್ಯೋತ್‌​ ಕೌರ್ ಅವರಿಗೆ ಚಂಡೀಗಢದಿಂದ ಟಿಕೆಟ್​ ನೀಡಲಿಲ್ಲ ಎಂದು ಸಿಧು, ಸಿಎಂ ಸಿಂಗ್ ವಿರುದ್ಧ ಹರಿಹಾಯ್ದಿದ್ದರು.

For All Latest Updates

TAGGED:

ABOUT THE AUTHOR

...view details