ಕರ್ನಾಟಕ

karnataka

ETV Bharat / bharat

ಆರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಮನೀಷ್ ಸಿಸೋಡಿಯಾ

ಆಮ್​ ಆದ್ಮಿ ಪಕ್ಷದ 9ನೇ ಪರಿಷತ್​ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮನೀಷ್ ಸಿಸೋಡಿಯಾ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಮುಂಬರುವ ಆರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದಿದ್ದಾರೆ.

By

Published : Jan 28, 2021, 7:05 PM IST

Manish Sisodia
Manish Sisodia

ನವದೆಹಲಿ:ಮುಂಬರುವ ಪಂಜಾಬ್​, ಉತ್ತರ ಪ್ರದೇಶ, ಉತ್ತರಾಖಂಡ್​, ಗೋವಾ, ಹಿಮಾಚಲ ಪ್ರದೇಶ ಹಾಗೂ ಗುಜರಾತ್​ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಸ್ಪರ್ಧೆ ಮಾಡಲಿದೆ ಎಂದು ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

ಆಮ್​ ಆದ್ಮಿ ಪಕ್ಷದ 9ನೇ ಪರಿಷತ್​ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೆಹಲಿಯಲ್ಲಿ ಕೇಜ್ರಿವಾಲ್​ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಪರ ಕೆಲಸ ಮುಂದಿಟ್ಟುಕೊಂಡು ತಾವು ಚುನಾವಣೆ ಎದುರಿಸಲಿದ್ದೇವೆ ಎಂದಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಮನೀಷ್ ಸಿಸೋಡಿಯಾ

ಓದಿ: ಒಂದೇ ವಾರದಲ್ಲಿ 10 ಲಕ್ಷ ಮಂದಿಗೆ ಕೋವಿಡ್​ ವ್ಯಾಕ್ಸಿನ್​: ಕೇಂದ್ರ ಆರೋಗ್ಯ ಇಲಾಖೆ

ದೇಶದಲ್ಲಿರುವ ಬೇರೆ ಪಕ್ಷಗಳಿಗೆ ಯಾವುದೇ ದೃಷ್ಠಿಕೋನವಿಲ್ಲ. ಹೀಗಾಗಿ ಆಗಷ್ಟೇ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತವೆ. ಆದರೆ ಆಮ್​ ಆದ್ಮಿ ಪಕ್ಷ ಭವಿಷ್ಯದ ದೃಷ್ಠಿಕೋನವಿಟ್ಟುಕೊಂಡಿದ್ದು, ಅದರ ಬಗ್ಗೆ ವಿಚಾರ ಮಾಡುತ್ತೇವೆ. ಜತೆಗೆ ಪ್ರಾಯೋಗಿಕವಾಗಿ ಜಾರಿಗೆ ತರಲು ಪಕ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.

ಇದೇ ವೇಳೆ ದೆಹಲಿ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, ಕೃತ್ಯದಲ್ಲಿ ಭಾಗಿಯಾದ ಯಾವುದೇ ಆರೋಪಿಯನ್ನು ಬಿಡಲ್ಲ. ಕಳೆದ 50-60 ದಿನಗಳಿಂದ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಏಕಾಏಕಿಯಾಗಿ ಹಿಂಸಾಚಾರ ನಡೆದಿದೆ. ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದರು.

ABOUT THE AUTHOR

...view details