ಖಮ್ಮಂ: ಆಕೆ ಮದುವೆಗೂ ಮುನ್ನವೇ ತನ್ನ ಪ್ರಿಯಕರನ ಜೊತೆ ನೂರೊಂದು ಕನಸುಗಳನ್ನು ಕಂಡಿದ್ದಳು. ಆದ್ರೆ, ಆ ಕನಸುಗಳು ಆಕೆಯ ಕೊಲೆಯಲ್ಲಿ ಕಮರಿಹೋಗಿವೆ.
ಪೆನುಬಲ್ಲಿ ತಾಲೂಕಿನ ಕುಪ್ಪಿನಕುಂಟ್ಲದ ಕಾವಿಟಿ ತೇಜಸ್ವಿನಿ (20) ಮತ್ತು ಸತ್ತುಪಲ್ಲಿ ಗ್ರಾಮದ ನೀತಿನ್ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಲಿಟೆಕ್ನಿಕಲ್ ಓದುತ್ತಿದ್ದ ತೇಜಸ್ವಿನಿಯ ಕೆಲ ವಿಷಯಗಳು ಉಳಿದುಕೊಂಡಿದ್ದರಿಂದ ಆಕೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಳು. ಇನ್ನು ನಿತಿನ್ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ, ಇಬ್ಬರು ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡಿದ್ದರು. ಆದ್ರೆ, ತಾಳಿ ಕಟ್ಟಬೇಕಾಗಿದ್ದ ಕೈಗಳೇ ಪ್ರೇಮಿಯನ್ನು ಕೊಲೆ ಮಾಡಿವೆ.
ಭಾನುವಾರ ಮನೆಯಲ್ಲಿ ಯಾರಿಗೂ ತಿಳಿಯದಂತೆ ವಾಯುವಿವಾರಕ್ಕೆಂದು ನಿತಿನ್ ಬೈಕ್ನಲ್ಲಿ ಕುಳಿತುಕೊಂಡು ತೇಜಸ್ವಿನಿ ಹೋಗಿದ್ದಾಳೆ. ನಿತಿನ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ತನ್ನ ಕೈವಸ್ತ್ರದಿಂದ ಕತ್ತನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿದ್ದಾನೆ. ಬಳಿಕ ಏನೂ ಅರಿಯದ ರೀತಿ ಹಾಸ್ಟೆಲ್ಗೆ ತೆರಳಿದ್ದಾನೆ.