ಕರ್ನಾಟಕ

karnataka

ETV Bharat / bharat

ತಾಳಿ ಕಟ್ಟುವ ಕೈಯಿಂದಲೇ ಪ್ರಿಯತಮೆಯ ಕೊಲೆ; ಹಾಯಾಗಿ ಹಾಸ್ಟೆಲ್​ನಲ್ಲಿ ಕಾಲ ಕಳೆದ ಲವರ್​!

ಅವರಿಬ್ಬರು ಪರಸ್ಪರ ಗಾಢವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು. ಆತ ನಾವು ಮದುವೆ ಮಾಡಿಕೊಳ್ಳೋಣ ಎಂದು ಯುವತಿಗೆ ಭರವಸೆಯನ್ನೂ ನೀಡಿದ್ದ. ಆದ್ರೆ, ತಾಳಿ ಕಟ್ಟುವ ಕೈಗಳೇ ಆಕೆಯನ್ನು ಕೊಂದಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

By

Published : Aug 27, 2019, 8:36 PM IST

ತಾಳಿ ಕಟ್ಟುವ ಕೈಯಿಂದಲೇ ಪ್ರೇಮಿ ಕೊಲೆ

ಖಮ್ಮಂ: ಆಕೆ ಮದುವೆಗೂ ಮುನ್ನವೇ ತನ್ನ ಪ್ರಿಯಕರನ​ ಜೊತೆ ನೂರೊಂದು ಕನಸುಗಳನ್ನು ಕಂಡಿದ್ದಳು. ಆದ್ರೆ, ಆ ಕನಸುಗಳು ಆಕೆಯ ಕೊಲೆಯಲ್ಲಿ ಕಮರಿಹೋಗಿವೆ.

ಪೆನುಬಲ್ಲಿ ತಾಲೂಕಿನ ಕುಪ್ಪಿನಕುಂಟ್ಲದ ಕಾವಿಟಿ ತೇಜಸ್ವಿನಿ (20) ಮತ್ತು ಸತ್ತುಪಲ್ಲಿ ಗ್ರಾಮದ ನೀತಿನ್​ ಕಾಲೇಜು​ ವಿದ್ಯಾಭ್ಯಾಸದ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಲಿಟೆಕ್ನಿಕಲ್​ ಓದುತ್ತಿದ್ದ ತೇಜಸ್ವಿನಿಯ ಕೆಲ ವಿಷಯಗಳು ಉಳಿದುಕೊಂಡಿದ್ದರಿಂದ​ ಆಕೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಳು. ಇನ್ನು ನಿತಿನ್​ ಬಿಟೆಕ್​ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ, ಇಬ್ಬರು ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡಿದ್ದರು. ಆದ್ರೆ, ತಾಳಿ ಕಟ್ಟಬೇಕಾಗಿದ್ದ ಕೈಗಳೇ ಪ್ರೇಮಿಯನ್ನು ಕೊಲೆ ಮಾಡಿವೆ.

ತಾಳಿ ಕಟ್ಟುವ ಕೈಯಿಂದಲೇ ಪ್ರೇಮಿ ಕೊಲೆ

ಭಾನುವಾರ ಮನೆಯಲ್ಲಿ ಯಾರಿಗೂ ತಿಳಿಯದಂತೆ ವಾಯುವಿವಾರಕ್ಕೆಂದು ನಿತಿನ್​ ಬೈಕ್‌ನಲ್ಲಿ ಕುಳಿತುಕೊಂಡು ತೇಜಸ್ವಿನಿ ಹೋಗಿದ್ದಾಳೆ. ನಿತಿನ್​ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ತನ್ನ ಕೈವಸ್ತ್ರದಿಂದ ಕತ್ತನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿದ್ದಾನೆ. ಬಳಿಕ ಏನೂ ಅರಿಯದ ರೀತಿ ಹಾಸ್ಟೆಲ್​ಗೆ ತೆರಳಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಸೋಮವಾರ ನನ್ನ ಮಗಳು ನಾಪತ್ತೆಯಾಗಿದ್ದಾಳೆಂದು ತೇಜಸ್ವಿನಿ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ತೇಜಸ್ವಿನಿ ಮೊಬೈಲ್​ ಕಾಲ್​ ರೆಕಾರ್ಡ್​ ಲಿಸ್ಟ್​ ತೆಗೆದಿದ್ದಾರೆ. ಲಾಸ್ಟ್​ ಕಾಲ್​ ನಿತಿನ್‌ಗೆ ಹೋಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ನಿತಿನ್‌ನನ್ನು ಫೋನ್​ ಮೂಲಕ ಪತ್ತೆ ಹಚ್ಚಿದ್ದಾಗ ಆತ ಹಾಸ್ಟೆಲ್​ನಲ್ಲಿರುವುದು ತಿಳಿದಿದೆ. ಕೂಡಲೇ ಹಾಸ್ಟೆಲ್‌ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಗಳನ್ನು ಕಳೆದುಕೊಂಡ ಕುಟಂಬದ ಆಕ್ರಂದನ ಮನ ಕಲುಕವಂತಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details