ರಾಮನಾಥಪುರಂ:ಯಾರಿಗೂ ತಿಳಿಯದಂತೆ ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿಗೂ ಜನ್ಮ ನೀಡಿ ಐದನೇ ಮದುವೆಗೆ ರೆಡಿಯಾಗ್ತಿದ್ದ ಭೂಪ ಕೇವಲ ಒಂದೇ ಒಂದು ಮಿಸ್ಕಾಲ್ನಿಂದ ಸಿಕ್ಕಿಬಿದ್ದಿದ್ದಾನೆ.
ಈ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ವಂಚಕನ ಹೆಸರು ಗಂಗಾಧರ್.
ರಾಮನಾಥಪುರಂ:ಯಾರಿಗೂ ತಿಳಿಯದಂತೆ ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿಗೂ ಜನ್ಮ ನೀಡಿ ಐದನೇ ಮದುವೆಗೆ ರೆಡಿಯಾಗ್ತಿದ್ದ ಭೂಪ ಕೇವಲ ಒಂದೇ ಒಂದು ಮಿಸ್ಕಾಲ್ನಿಂದ ಸಿಕ್ಕಿಬಿದ್ದಿದ್ದಾನೆ.
ಈ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ವಂಚಕನ ಹೆಸರು ಗಂಗಾಧರ್.
ಇಲ್ಲಿನ ಅಳಗನ್ಕುಲಂ ಗ್ರಾಮದ ಕೊಟ್ಟೈರಾಜು ಮಗಳು ಕೋಮಲದೇವಿ ಸೇರಿದಂತೆ ನಾಲ್ವರು ಮಹಿಳೆಯರು ಮೋಸ ಹೋಗಿದ್ದಾರೆ. ಮೂಡಕೊಟ್ಟಾನ್ ಗ್ರಾಮದ ರಾಮು ಮಗ ಗಂಗಾಧರ್ರನ್ನು 2008ರಲ್ಲಿ ಕೋಮಲಾದೇವಿ ಮದುವೆಯಾಗಿದ್ದರು. ಉದ್ಯೋಗಕ್ಕಾಗಿ ಗಂಗಾಧರ್ ದುಬೈಗೆ ತೆರಳಿದ್ದಾನೆ. ಬಳಿಕ ಹೆಂಡ್ತಿ ಕೋಮಲಾದೇವಿಯನ್ನು ಸಹ ದುಬೈಗೆ ಕರೆದೊಯ್ದಿದ್ದ.
ದುಬೈಯಲ್ಲಿ ಗಂಗಾಧರ್ ಉದ್ಯೋಗಕ್ಕೆ ಹೋಗ್ತಿದ್ದೇನೆ ಅಂತಾ ಹೇಳಿ ಪಬ್ಗೆ ಹೋಗುತ್ತಿದ್ದ. ಈ ವಿಷಯ ಕೋಮಾಲದೇವಿಗೆ ತಿಳಿದಿದೆ. ಇದರ ಬಗ್ಗೆ ಕೇಳಿದ್ದಕ್ಕೆ ಹೆಂಡ್ತಿಯನ್ನು ಸ್ವಗ್ರಾಮಕ್ಕೆ ಬಿಟ್ಟು ಮತ್ತೆ ದುಬೈಗೆ ಹಾರಿದ್ದಾನೆ. ಹೀಗೆ ಹತ್ತಾರು ವರ್ಷ ಕಳೆದಿದೆ. ಇತ್ತೀಚೆಗೆ ದುಬೈನಿಂದ ಗಂಗಾಧರ್ ಮನೆಗೆ ಬಂದಿದ್ದಾನೆ. ಈ ವೇಳೆ ಗಂಗಾಧರ್ ಫೋನ್ಗೆ ಮಿಸ್ಕಾಲ್ ಬಂದಿದೆ. ಅನುಮಾನಗೊಂಡ ಕೋಮಲಾದೇವಿ ಮತ್ತೆ ಅದೇ ನಂಬರ್ಗೆ ಫೋನ್ ಮಾಡಿದ್ದಾರೆ. ಮಹಿಳೆಯೊಬ್ಬಳು ಫೋನ್ ರಿಸೀವ್ ಮಾಡಿದ್ದಾರೆ. ನೀವು ಯಾರು ಅಂತಾ ಕೋಮಲಾದೇವಿ ಕೇಳಿದಾಗ ‘ನಾನು ಗಂಗಾಧರ್ ಪತ್ನಿ ಕವಿತಾ’ ಅಂತಾ ಆ ಮಹಿಳೆ ಹೇಳಿದ್ದಾರೆ. ಆಕೆ ಬಗ್ಗೆ ಮಾಹಿತಿ ಕಲೆ ಹಾಕಿದ ಕೋಮಲಾದೇವಿ ಗಂಡ ಗಂಗಾಧರ್ಗೆ ‘ಕವಿತಾ ಯಾರು’ ಅಂತಾ ಕೇಳಿದ್ದಾರೆ. ಗಂಗಾಧರ್ ‘ಯಾವ ಕವಿತಾ, ನನಗೆ ಕವಿತಾ ಯಾರು ಅಂತಾ ಗೊತ್ತಿಲ್ಲ’ ಎಂದು ಹೇಳಿ ನುಣಿಚಿಕೊಂಡಿದ್ದಾನೆ.
ಈ ವಿಷಯದ ಬಗ್ಗೆ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಈ ಸಮಯದಲ್ಲಿ ಗಂಗಾಧರ್ ಚೆನ್ನೈನ ಯಮುನಾ, ದೀಪ ಎಂಬ ಮಹಿಳೆಯರನ್ನು ಮದುವೆ ಮಾಡಿಕೊಂಡಿರುವುದರ ಬಗ್ಗೆ ಕೋಮಲಾದೇವಿಗೆ ತಿಳಿದಿದೆ. ಇದಲ್ಲದೇ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ರೆಡಿಯಾಗಿರುವ ಬಗ್ಗೆಯೂ ಅರಿತ ಕೋಮಲಾದೇವಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ನಾಲ್ಕು ಮದುವೆ ಮಾಡಿಕೊಂಡು, ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಗಂಗಾಧರ್ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.