ಕರ್ನಾಟಕ

karnataka

4 ಮದುವೆ, 4 ಮಕ್ಕಳು, ಹತ್ತಾರು ವರ್ಷ ಸಂಸಾರ; ಮಿಸ್​ಕಾಲ್​​ನಿಂದ ಕಣ್ಣಾಮುಚ್ಚಾಲೆ ಆಟಕ್ಕೆ ಬ್ರೇಕ್​!

ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿರುವ ಭೂಪ ಐದನೇ ಮದುವೆಗೆ ತಯಾರಾಗಿದ್ದನು. ಆದ್ರೆ ಒಂದೇ ಒಂದು ಮಿಸ್​ಕಾಲ್​​​ನಿಂದ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

By

Published : Jul 28, 2019, 4:16 PM IST

Published : Jul 28, 2019, 4:16 PM IST

4 ಮದುವೆ, 4 ಮಕ್ಕಳು, ಹತ್ತಾರು ವರ್ಷ ಸಂಸಾರ

ರಾಮನಾಥಪುರಂ:ಯಾರಿಗೂ ತಿಳಿಯದಂತೆ ನಾಲ್ಕು ಮದುವೆ ಮಾಡ್ಕೊಂಡು, ನಾಲ್ಕು ಮಕ್ಕಳಿಗೂ ಜನ್ಮ ನೀಡಿ ಐದನೇ ಮದುವೆಗೆ ರೆಡಿಯಾಗ್ತಿದ್ದ ಭೂಪ ಕೇವಲ ಒಂದೇ ಒಂದು ಮಿಸ್​ಕಾಲ್​ನಿಂದ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ವಂಚಕನ ಹೆಸರು ಗಂಗಾಧರ್‌.

ಇಲ್ಲಿನ ಅಳಗನ್​ಕುಲಂ ಗ್ರಾಮದ ಕೊಟ್ಟೈರಾಜು ಮಗಳು ಕೋಮಲದೇವಿ ಸೇರಿದಂತೆ ನಾಲ್ವರು ಮಹಿಳೆಯರು ಮೋಸ ಹೋಗಿದ್ದಾರೆ. ಮೂಡಕೊಟ್ಟಾನ್​ ಗ್ರಾಮದ ರಾಮು ಮಗ ಗಂಗಾಧರ್​ರನ್ನು 2008ರಲ್ಲಿ ಕೋಮಲಾದೇವಿ ಮದುವೆಯಾಗಿದ್ದರು. ಉದ್ಯೋಗಕ್ಕಾಗಿ ಗಂಗಾಧರ್​ ದುಬೈಗೆ ತೆರಳಿದ್ದಾನೆ. ಬಳಿಕ ಹೆಂಡ್ತಿ ಕೋಮಲಾದೇವಿಯನ್ನು ಸಹ ದುಬೈಗೆ ಕರೆದೊಯ್ದಿದ್ದ.

ದುಬೈಯಲ್ಲಿ ಗಂಗಾಧರ್​ ಉದ್ಯೋಗಕ್ಕೆ ಹೋಗ್ತಿದ್ದೇನೆ ಅಂತಾ ಹೇಳಿ ಪಬ್​ಗೆ ಹೋಗುತ್ತಿದ್ದ. ಈ ವಿಷಯ ಕೋಮಾಲದೇವಿಗೆ ತಿಳಿದಿದೆ. ಇದರ ಬಗ್ಗೆ ಕೇಳಿದ್ದಕ್ಕೆ ಹೆಂಡ್ತಿಯನ್ನು ಸ್ವಗ್ರಾಮಕ್ಕೆ ಬಿಟ್ಟು ಮತ್ತೆ ದುಬೈಗೆ ಹಾರಿದ್ದಾನೆ. ಹೀಗೆ ಹತ್ತಾರು ವರ್ಷ ಕಳೆದಿದೆ. ಇತ್ತೀಚೆಗೆ ದುಬೈನಿಂದ ಗಂಗಾಧರ್​ ಮನೆಗೆ ಬಂದಿದ್ದಾನೆ. ಈ ವೇಳೆ ಗಂಗಾಧರ್ ಫೋನ್​ಗೆ ಮಿಸ್​ಕಾಲ್​ ಬಂದಿದೆ. ಅನುಮಾನಗೊಂಡ ಕೋಮಲಾದೇವಿ ಮತ್ತೆ ಅದೇ ನಂಬರ್​ಗೆ ಫೋನ್​ ಮಾಡಿದ್ದಾರೆ. ಮಹಿಳೆಯೊಬ್ಬಳು ಫೋನ್​ ರಿಸೀವ್​ ಮಾಡಿದ್ದಾರೆ. ನೀವು ಯಾರು ಅಂತಾ ಕೋಮಲಾದೇವಿ ಕೇಳಿದಾಗ ‘ನಾನು ಗಂಗಾಧರ್​ ಪತ್ನಿ ಕವಿತಾ’ ಅಂತಾ ಆ ಮಹಿಳೆ ಹೇಳಿದ್ದಾರೆ. ಆಕೆ ಬಗ್ಗೆ ಮಾಹಿತಿ ಕಲೆ ಹಾಕಿದ ಕೋಮಲಾದೇವಿ ಗಂಡ ಗಂಗಾಧರ್​ಗೆ ‘ಕವಿತಾ ಯಾರು’ ಅಂತಾ ಕೇಳಿದ್ದಾರೆ. ಗಂಗಾಧರ್​ ‘ಯಾವ ಕವಿತಾ, ನನಗೆ ಕವಿತಾ ಯಾರು ಅಂತಾ ಗೊತ್ತಿಲ್ಲ’ ಎಂದು ಹೇಳಿ ನುಣಿಚಿಕೊಂಡಿದ್ದಾನೆ.

ಈ ವಿಷಯದ ಬಗ್ಗೆ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಈ ಸಮಯದಲ್ಲಿ ಗಂಗಾಧರ್​ ಚೆನ್ನೈನ ಯಮುನಾ, ದೀಪ ಎಂಬ ಮಹಿಳೆಯರನ್ನು ಮದುವೆ ಮಾಡಿಕೊಂಡಿರುವುದರ ಬಗ್ಗೆ ಕೋಮಲಾದೇವಿಗೆ ತಿಳಿದಿದೆ. ಇದಲ್ಲದೇ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ರೆಡಿಯಾಗಿರುವ ಬಗ್ಗೆಯೂ ಅರಿತ ಕೋಮಲಾದೇವಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ನಾಲ್ಕು ಮದುವೆ ಮಾಡಿಕೊಂಡು, ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಗಂಗಾಧರ್​ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details