ಕರ್ನಾಟಕ

karnataka

ಕೊರಳಲ್ಲಿ ಬಾಂಬ್​, ಕೈಯಲ್ಲಿ ಪೆಟ್ರೋಲ್​: ಪತ್ನಿಗಾಗಿ ಅತ್ತೆ-ಮಾವನ ಎದುರು ಅಳಿಯನ ಹೈಡ್ರಾಮಾ! ವಿಡಿಯೋ

ನನ್ನ ಪತ್ನಿಯನ್ನ ಸಂಸಾರಕ್ಕೆ ಕಳಸ್ತೀರಾ... ಇಲ್ಲ ಬಾಂಬ್​ಗಳಿಂದ ಉಡಾಯಿಸಿಕೊಳ್ಳಲೇ? ಎಂದು ವ್ಯಕ್ತಿವೋರ್ವ ತನ್ನ ಅತ್ತೆ-ಮಾವನಿಗೆ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

By

Published : Sep 23, 2019, 1:07 PM IST

Published : Sep 23, 2019, 1:07 PM IST

Updated : Sep 23, 2019, 2:42 PM IST

ಬೆದರಿಕೆ

ಕಡಲೂರು:ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತಿರಾಯನೋರ್ವ ಕೊರಳಿನಲ್ಲಿ ನಾಡ ಬಾಂಬ್​ಗಳ ಸರ ಹಾಕಿಕೊಂಡು ಅತ್ತೆ - ಮಾವನ ಎದುರು ಹೈಡ್ರಾಮಾ ನಡೆಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ಕಂಡುಬಂದಿದೆ.

ಮಣಿಕಂಠ ಎಂಬಾತ ನಾಡ ಬಾಂಬ್​ಗಳ ಸರವನ್ನು ಕೊರಳಲ್ಲಿ ಹಾಕಿಕೊಂಡು ಕೈಯಲ್ಲಿ ಪೆಟ್ರೋಲ್​ ಕ್ಯಾನ್​ ಹಿಡಿದುಕೊಂಡು ಪತ್ನಿ ಮನೆಗೆ ತೆರಳಿದ್ದ. ನನ್ನ ಹೆಂಡತಿಯನ್ನ ಸಂಸಾರಕ್ಕೆ ಕಳುಹಿಸಿ. ಇಲ್ಲವಾದಲ್ಲಿ ಬಾಂಬ್​ಗಳನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ತೆ - ಮಾವನಿಗೆ ಬೆದರಿಕೆ ಹಾಕಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡಿದ್ದ.

ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ಪೇದೆವೋರ್ವರು ಇದನ್ನು ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ದಿಢೀರ್​​ ಸ್ಥಳಕ್ಕೆ ದೌಡಾಯಿಸಿದ್ದರು.

ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ..!

ಪೊಲೀಸರು ಮಣಿಕಂಠನನ್ನು ಮನವೊಲಿಸಲು ಪ್ರಯತ್ನಿಸಿದರು. ಆದ್ರೆ ಮಣಿಕಂಠ ಇದಕ್ಕೆಲ್ಲ ಕಿವಿಗೊಡಲಿಲ್ಲ. ಬಳಿಕ ಮಣಿಕಂಠನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್​ಗಳ ಸರವನ್ನು ತೆಗೆದ. ಅಲ್ಲದೆ ತಾನು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನನ್ನ ಪತ್ನಿನಾ ಸಂಸಾರಕ್ಕೆ ಕಳಸ್ತೀರಾ, ಇಲ್ಲ ಬಾಂಬ್​ಗಳಿಂದ ಸ್ಫೋಟಿಸಿಕೊಳ್ಳಲಾ!

ಈ ಘಟನೆ ಕುರಿತು ಪೊಲೀಸರು ಮಣಿಕಂಠ ಮತ್ತು ಆತನ ಹೆಂಡತಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆ ಕಚ್ಚಾ ಬಾಂಬ್​ಗಳು ಎಲ್ಲಿಂದ ಬಂದವು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

Last Updated : Sep 23, 2019, 2:42 PM IST

ABOUT THE AUTHOR

...view details