ಕರ್ನಾಟಕ

karnataka

ಬಸ್‌ಗಳ​​ ನಡುವೆ ಢಿಕ್ಕಿ.. ಇಬ್ಬರ ಸಾವು, 40 ಪ್ರಯಾಣಿಕರಿಗೆ ಗಾಯ

ಆಂಧ್ರದ ಚಿತ್ತೂರಿನಲ್ಲಿ ಖಾಸಗಿ ಬಸ್​ ಮತ್ತು ಸಾರಿಗೆ ಸಂಸ್ಥೆ ಬಸ್​​ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ರೆ, 40 ಪ್ರಯಾಣಿಕರಿಗೆ ಗಾಯಗಳಾಗಿವೆ.

By

Published : Jan 8, 2020, 1:38 PM IST

Published : Jan 8, 2020, 1:38 PM IST

Updated : Jan 8, 2020, 1:55 PM IST

bus accident
ಖಾಸಗಿ ಮತ್ತು ಸರ್ಕಾರಿ ಬಸ್​​ ನಡುವೆ ಅಪಘಾತ

ಚಿತ್ತೂರು(ಆಂಧ್ರಪ್ರದೇಶ):ಖಾಸಗಿ ಬಸ್​​ ಮತ್ತು ಎಪಿಎಸ್​​ಆರ್​ಟಿಸಿ ಅಮರಾವತಿ ವೋಲ್ವೋ ಬಸ್​ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ರೆ 40 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 4.30ರ ಸುಮಾರಿಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ್​ ಬಳಿ ವಿಜಯವಾಡದಿಂದ ಕುಪ್ಪಮ್​​ಗೆ ತೆರಳುತ್ತಿದ್ದ ಆಂಧ್ರ ಸಾರಿಗೆ ಸಂಸ್ಥೆ ಬಸ್​ ಹಾಗೂ ಖಾಸಗಿ ಬಸ್​ ನಡುವೆ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್​​ ಚಾಲಕ ರಮೆಶ್​​ ಸೇರಿ ಇನ್ನೋರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು 40ಕ್ಕೂ ಹೆಚ್ಚು ಗಾಯಾಳುಗಳನ್ನು ರುಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 8, 2020, 1:55 PM IST

ABOUT THE AUTHOR

...view details