ಚಿತ್ತೂರು(ಆಂಧ್ರಪ್ರದೇಶ):ಖಾಸಗಿ ಬಸ್ ಮತ್ತು ಎಪಿಎಸ್ಆರ್ಟಿಸಿ ಅಮರಾವತಿ ವೋಲ್ವೋ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ರೆ 40 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬಸ್ಗಳ ನಡುವೆ ಢಿಕ್ಕಿ.. ಇಬ್ಬರ ಸಾವು, 40 ಪ್ರಯಾಣಿಕರಿಗೆ ಗಾಯ
ಆಂಧ್ರದ ಚಿತ್ತೂರಿನಲ್ಲಿ ಖಾಸಗಿ ಬಸ್ ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ರೆ, 40 ಪ್ರಯಾಣಿಕರಿಗೆ ಗಾಯಗಳಾಗಿವೆ.
Published : Jan 8, 2020, 1:38 PM IST
Published : Jan 8, 2020, 1:38 PM IST
|Updated : Jan 8, 2020, 1:55 PM IST
ಇಂದು ಬೆಳಗ್ಗೆ 4.30ರ ಸುಮಾರಿಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ್ ಬಳಿ ವಿಜಯವಾಡದಿಂದ ಕುಪ್ಪಮ್ಗೆ ತೆರಳುತ್ತಿದ್ದ ಆಂಧ್ರ ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಚಾಲಕ ರಮೆಶ್ ಸೇರಿ ಇನ್ನೋರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು 40ಕ್ಕೂ ಹೆಚ್ಚು ಗಾಯಾಳುಗಳನ್ನು ರುಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.