ಕರ್ನಾಟಕ

karnataka

By

Published : Feb 26, 2021, 12:51 PM IST

Updated : Feb 26, 2021, 1:05 PM IST

ETV Bharat / bharat

ಬಾಲಕೋಟ್​ ಏರ್​ಸ್ಟ್ರೈಕ್​ಗೆ ಎರಡು ವರ್ಷ: ವಾಯುಪಡೆ ಶ್ಲಾಘಿಸಿದ ಅಮಿತ್​ ಶಾ

ಪುಲ್ವಾಮಾ ದಾಳಿಯ ನಂತರ ಭಾರತೀಯ ವಾಯುಪಡೆ ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಜೈಷ್ ಎ ಮೊಹಮದ್ ಕ್ಯಾಂಪ್​ ಮೇಲೆ ದಾಳಿ ಮಾಡಿ, ಪ್ರತೀಕಾರ ತೀರಿಸಿಕೊಂಡಿತ್ತು. ಈ ಘಟನೆ ನಡೆದು ಇಂದಿಗೆ ಎರಡು ವರ್ಷಗಳಾಗಿವೆ.

Amit Shah
ಅಮಿತ್​ ಶಾ

ನವದೆಹಲಿ:ಬಾಲಕೋಟ್​ ಏರ್​ಸ್ಟ್ರೈಕ್​ ನಡೆಸಿ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಪುಲ್ವಾಮಾ ಭಯೋತ್ಪಾದನಾ ದಾಳಿಗೆ ನೀಡಿದ ಪ್ರತ್ಯುತ್ತರವನ್ನು ಸ್ಮರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 2019ರ ಇಂದಿನ ದಿನ, ಭಾರತೀಯ ವಾಯುಪಡೆ ಭಯೋತ್ಪಾದನಾ ದಾಳಿಯ ವಿರುದ್ಧದ ನೀತಿಯನ್ನು ಪ್ರಚುರಪಡಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸೂಚಿಸಿದ ಅಮಿತ್ ಶಾ, ಏರ್​ಸ್ಟ್ರೈಕ್​ನಲ್ಲಿ ಪಾಲ್ಗೊಂಡ ಯೋಧರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆ ಸುರಕ್ಷಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಇಂದು ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ

ಫೆಬ್ರವರಿ 14 2019ರಂದು ಜೈಷ್ ಎ ಮೊಹಮದ್ ಭಯೋತ್ಪಾದಕ ಸಂಘಟನೆ ಜಮ್ಮು- ಶ್ರೀನಗರದ ಪುಲ್ವಾಮಾ ಬಳಿಯ ಹೆದ್ದಾರಿಯ ಸಿಆರ್​ಪಿಎಫ್​ ವಾಹನದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40 ಸಿಆರ್​​ಪಿಎಫ್​ ಯೋಧರು ಹುತಾತ್ಮರಾಗಿದ್ದರು.

ಇದಾದ ಕೆಲವು ದಿನಗಳ ನಂತರ ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಜೈಷ್ ಎ ಮೊಹಮದ್ ಕ್ಯಾಂಪ್​ ಮೇಲೆ ದಾಳಿ ಮಾಡಿ, ಪ್ರತೀಕಾರ ತೀರಿಸಿಕೊಳ್ಳಲಾಗಿತ್ತು. ಈ ಘಟನೆ ನಡೆದು ಇಂದಿಗೆ ಎರಡು ವರ್ಷಗಳಾಗಿದೆ.

Last Updated : Feb 26, 2021, 1:05 PM IST

ABOUT THE AUTHOR

...view details