ಕರ್ನಾಟಕ

karnataka

ETV Bharat / bharat

ವಾರದ ಕೊನೆಯ ದಿನ ನಿಮ್ಮ ರಾಶಿಯ ಫಲಾಫಲ ಹೇಗಿದೆ...?

ಭಾನುವಾರದ ರಾಶಿಫಲ

By

Published : Mar 7, 2021, 5:01 AM IST

07 March 2021 Etv Bharat horoscope
ಭಾನುವಾರದ ರಾಶಿಫಲ

ಮೇಷ

ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ, ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ಸಂಜೆಯಲ್ಲಿ ಕೊಂಚ ಆನಂದ ನಿರೀಕ್ಷಿಸಬಹುದು. ನೀವು ಖ್ಯಾತ ವ್ಯಕ್ತಿಯಾಗುವ ಬಯಕೆ ಸದ್ಯದಲ್ಲೇ ಬೆಳಕು ಕಾಣಲಿದೆ.

ವೃಷಭ

ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಸೌಖ್ಯ ಮತ್ತು ಸಂಪತ್ತಿಗೆ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ

ವಿರುದ್ಧ ಲಿಂಗದವರೊಂದಿಗೆ ಮಾತುಕತೆ ನಿಮಗೆ ಸಕಾರಾತ್ಮಕ ಮತ್ತು ಸಂತೋಷದ ಫಲಿತಾಂಶಗಳನ್ನು ಇಂದು ತಂದುಕೊಡುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ತಮ್ಮ ಮೇಲಧಿಕಾರಿಗಳು ಮತ್ತು ಕುಟುಂಬ ಸದಸ್ಯರಿಂದ ಅಗತ್ಯವಾಗಿರುವ ಉತ್ತೇಜನ ಪಡೆಯುತ್ತಾರೆ. ಶೈಕ್ಷಣಿಕವಾಗಿ, ನೀವು ನಿಮ್ಮ ಮನಸ್ಸಿನಲ್ಲಿ ಮೂಡುವ ಯಾವುದೇ ಸಮಸ್ಯೆಯನ್ನೂ ಪರಿಹರಿಸಲು ಶಕ್ತರಾಗುತ್ತೀರಿ.

ಕರ್ಕಾಟಕ

ಇಂದು ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ಮೊಂಡುತನದ್ದಾಗಿರುತ್ತದೆ. ಸಂಜೆ ನೀವು ಕುಟುಂಬ ಹಾಗೂ ಮಿತ್ರರ ಜೊತೆಯಲ್ಲಿ ಆನಂದಿಸುತ್ತೀರಿ.

ಸಿಂಹ

ಪ್ರಶಂಸೆಗಳ ಸುರಿಮಳೆಗೆ ಸಜ್ಜಾಗಿರಿ. ಅಂದರೆ ಅಕ್ಷರಶಃ ಅಲ್ಲ, ಆದರೆ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹಾಕಿರುವ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದ ಬಾಕಿ ಈಗ ದೊರೆತಿದೆ. ಅದರಲ್ಲೂ ಅದು ನೀವು ಕೈಗೊಂಡ ಹೊಸ ಯೋಜನೆಯಾಗಿದ್ದಲ್ಲಿ ಇದು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಧಿಕಾರಿಗಳ ಶುಭಾಕಾಂಕ್ಷೆಗಳ ಬೆಂಬಲದೊಂದಿಗೆ ಬಂದಿದೆ.

ಕನ್ಯಾ

ಇಂದು ಮೌಲ್ಯಗಳು ಮತ್ತು ವಾಸ್ತವಿಕತೆ ಮಿಶ್ರಣ ತುಂಬಿದೆ, ಮತ್ತು ಅತ್ಯಂತ ಮಾನವೀಯತೆಯ ವ್ಯಕ್ತಿಗೆ ಸ್ಪರ್ಧೆ ಇದ್ದರೆ ನೀವು ಗೆಲ್ಲುವ ಸಾಧ್ಯತೆ ಇಲ್ಲ. ನಿಮ್ಮ ಉತ್ಪಾದಕತೆ ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತೀರಿ.

ತುಲಾ

ಇಂದು ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳನ್ನು ವ್ಯಾಪಾರದಲ್ಲಿ ನಿಮ್ಮ ಯಶಸ್ಸಿನ ಕುರಿತು ಅಸೂಯೆ ಪಡುವಂತೆ ಮಾಡುತ್ತದೆ. ಅವರು ನಿಮ್ಮ ಪ್ರತಿಷ್ಠೆಯನ್ನು ನೋಯಿಸಲು ಅಥವಾ ಕುಂದಿಸಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಬದಲು ನೀವು ರಾಜಕೀಯವಾಗಿ ಸರಿಯಾಗಿರಲು ಯತ್ನಿಸಿ ನಿಮ್ಮ ಜಾಣ್ಮೆ ಬಳಸಿ ವಿಷಯಗಳನ್ನು ಇತ್ಯರ್ಥಪಡಿಸಬಹುದು. ಈ ಮಧ್ಯಾಹ್ನ ನಿಮ್ಮ ಜೀವನಕ್ಕೆ ಹೊಸ ಪ್ರೀತಿ ತರುತ್ತದೆ ಅದು ನಿಮಗೆ ಒಳ್ಳೆಯದಾಗಿರುತ್ತದೆ.

ವೃಶ್ಚಿಕ

ಇಂದು ಅತ್ಯಂತ ಕಾರ್ಯ ಚಟುವಟಿಕೆಗಳ ಕಾಲವಾಗಿದ್ದು ಚಟುವಟಿಕೆಗಳನ್ನು ನೋಡಬಹುದು. ಬಿಳಿಯಾಗುತ್ತಿರುವ ಕೂದಲು ನಿಮಗೆ ಮೌಲಿಕ ಪಾಠಗಳನ್ನು ಹೇಳುತ್ತದೆ, ಆದ್ದರಿಂದ ನಿಮ್ಮ ಬಾಸ್ ಮತ್ತು ಹಿರಿಯರಿಗೆ ತೆರೆದ ಕಿವಿಯಾಗಿರಿ. ಹಿರಿಯರು ಸಾಧ್ಯವಿರುವ ಎಲ್ಲಾ ಸಹಕಾರವನ್ನೂ ನಿಮಗೆ ವಿಸ್ತರಿಸುತ್ತಾರೆ. ನ್ಯಾಯಾಲಯಗಳಿಂದ ದೂರವಿರಿ ಏಕೆಂದರೆ ಕಾನೂನು ಸಮಸ್ಯೆಗಳು ನಿಮ್ಮನ್ನು ಮುಳುಗಿಸುತ್ತವೆ.

ಧನು

ಸ್ಪಷ್ಟತೆಯಿಲ್ಲದೆ ಓಡುವುದು ಮತ್ತು ಗೊಂದಲದ ಕೆಲಸಗಳು ನಿಮಗಾಗಿ ಕಾದಿವೆ. ಒಂದೇ ಕ್ಷಣದ ಶಾಂತಿಯನ್ನೂ ಕಾಣಲಾರಿರಿ. ಆದರೆ ಬಿಡುವು ತೆಗೆದುಕೊಳ್ಳಿ. ಅವ್ಯವಸ್ಥೆಯಿಂದ ಹಿಂದೆ ಸರಿಯಿರಿ ಅದರ ಸಂಪೂರ್ಣ ಸಾಧ್ಯತೆ ಗಮನಿಸಿ.

ಮಕರ

ವ್ಯರ್ಥವಾದ ವೆಚ್ಚ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮಾಡುತ್ತದೆ, ನೀವು ಆನಂದಿಸಲು ಇಂದು ಕಾರಣಗಳಿವೆ. ನಗದು ಹರಿವು- ಮತ್ತು ಅದರ ಗಮನಾರ್ಹ ಮೊತ್ತದಿಂದ ನೀವು ನಿಮ್ಮ ಹಣಕಾಸಿನ ಕುರಿತು ಸಂತೋಷ ಹೊಂದುವಂತೆ ಮಾಡುತ್ತದೆ. ಕೆಲಸ ಎಂದಿನಂತೆ ಮುಂದುವರೆಯುತ್ತದೆ.

ಕುಂಭ

ನಿಮ್ಮ ಕನಸಿನ ಮನೆ ಅಥವಾ ಕಾರು ತನ್ನ ದಾರಿಯಲ್ಲಿದೆ. ಹೊಸ ಆಸ್ತಿಗಳನ್ನು ಕೊಳ್ಳಲು ಇದು ಅದ್ಭುತ ಸಮಯ ಎಂದು ತಾರೆಗಳು ಸೂಚಿಸುತ್ತಿವೆ. ಪ್ರಶಾಂತ ದೇವಾಲಯ ಭೇಟಿ ನಿಮ್ಮ ಸಂಜೆಯನ್ನು ಮುಗಿಸಲು ಅತ್ಯಂತ ಪರಿಪೂರ್ಣ ವಿಧಾನ.

ಮೀನ

ಇಂದು ನೀವು ನಿಮ್ಮ ಅತ್ಯುತ್ತಮ ಸ್ಫೂರ್ತಿಯಲ್ಲಿಲ್ಲ. ನೀವು ಅತ್ಯಂತ ಸಣ್ಣ ಕಾರಣಗಳಿಗೆ ದುಃಖಿತರಾಗುವುದನ್ನು ನಿಯಂತ್ರಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ನಿಮ್ಮ ಮನೋಬಲವನ್ನು ಸದೃಢವಾಗಿರಿಸಬೇಕು. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲು ನಿಮಗೆ ನೆರವಾಗುತ್ತವೆ.

ABOUT THE AUTHOR

...view details