ETV Bharat / snippets

ರಾಯಚೂರು: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು

accident
ಅಪಘಾತಕ್ಕೀಡಾದ ಬೈಕ್​ಗಳು (ETV Bharat)
author img

By ETV Bharat Karnataka Team

Published : Oct 25, 2024, 5:26 PM IST

ರಾಯಚೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಸಿಎಸ್​​ಎಫ್ ಕ್ಯಾಂಪ್ ಚರ್ಚ್ ಬಳಿ ಶುಕ್ರವಾರ ಸಂಭವಿಸಿದೆ.

ಜವಳಗೇರಾ ಗ್ರಾಮದ ಮುದಿಯಾ ಥಾಮಸ್ (40) ಹಾಗೂ ಧುಮತಿ ಗ್ರಾಮದ ಶೇಕ್ಷಾವಲಿ ದರ್ಗಾಸಾಬ್ (20) ಮೃತರೆಂದು ಎಂದು ಗುರುತಿಸಲಾಗಿದೆ.

ಮದಿಯಾ ಥಾಮಸ್ ಜವಳಗೇರಾದಿಂದ ಸಿಎಸ್ಎಫ್​ಗೆ ಹೋಗುತ್ತಿದ್ದರೆ, ಶೇಕ್ಷಾವಲಿ ಸಿಎಸ್ಎಫ್​ನಿಂದ ಜವಳಗೇರಾ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್​ಗಳ ಹಿಂಬದಿಯಲ್ಲಿ ಕುಳಿತಿದ್ದ ಜವಳಗೇರಾದ ಯಂಕಪ್ಪ, ಧುಮತಿಯ ಮುಸ್ತಫಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಸಿಎಸ್​​ಎಫ್ ಕ್ಯಾಂಪ್ ಚರ್ಚ್ ಬಳಿ ಶುಕ್ರವಾರ ಸಂಭವಿಸಿದೆ.

ಜವಳಗೇರಾ ಗ್ರಾಮದ ಮುದಿಯಾ ಥಾಮಸ್ (40) ಹಾಗೂ ಧುಮತಿ ಗ್ರಾಮದ ಶೇಕ್ಷಾವಲಿ ದರ್ಗಾಸಾಬ್ (20) ಮೃತರೆಂದು ಎಂದು ಗುರುತಿಸಲಾಗಿದೆ.

ಮದಿಯಾ ಥಾಮಸ್ ಜವಳಗೇರಾದಿಂದ ಸಿಎಸ್ಎಫ್​ಗೆ ಹೋಗುತ್ತಿದ್ದರೆ, ಶೇಕ್ಷಾವಲಿ ಸಿಎಸ್ಎಫ್​ನಿಂದ ಜವಳಗೇರಾ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್​ಗಳ ಹಿಂಬದಿಯಲ್ಲಿ ಕುಳಿತಿದ್ದ ಜವಳಗೇರಾದ ಯಂಕಪ್ಪ, ಧುಮತಿಯ ಮುಸ್ತಫಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.