ETV Bharat / snippets

ಶಿವಮೊಗ್ಗ: ಅಬ್ಬಿಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರವಾಸಿಗ ನೀರುಪಾಲು

author img

By ETV Bharat Karnataka Team

Published : Jun 23, 2024, 9:21 PM IST

ಅಬ್ಬಿಫಾಲ್ಸ್​ನಲ್ಲಿ ಪ್ರವಾಸಿಗ ನೀರುಪಾಲು
ಅಬ್ಬಿಫಾಲ್ಸ್​ನಲ್ಲಿ ವಾಸಿಗ ನೀರುಪಾಲು (ETV Bharat)

ಶಿವಮೊಗ್ಗ: ಅಬ್ಬಿಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನೋರ್ವ ನೀರುಪಾಲಾಗಿರುವ ಘಟನೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಬಳಿ ನಡೆದಿದೆ. ವಿನೋದ್ ರಾಜ್ (26) ನೀರುಪಾಲಾದ ಪ್ರವಾಸಿಗ.

ಭಾನುವಾರ ಬೆಂಗಳೂರಿನಿಂದ 12 ಜನ ಸಾಫ್ಟ್​ವೇರ್​ ಇಂಜಿನಿಯರ್​ಗಳ ತಂಡ ಅಬ್ಬಿಫಾಲ್ಸ್ ವೀಕ್ಷಣೆಗೆ ಆಗಮಿಸಿತ್ತು. ಈ ವೇಳೆ ವಿನೋದ್ ರಾಜ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲುಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾರೆ. ವಿನೋದ್ ರಾಜ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂಲತಃ ಬಳ್ಳಾರಿ ಜಿಲ್ಲೆಯವರು ಎಂದ ತಿಳಿದು ಬಂದಿದೆ. ವಿನೋದ್ ರಾಜ್ ಪತ್ತೆಗೆ ಹೊಸನಗರ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫಾಲ್ಸ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಫಾಲ್ಸ್​ಗೆ ತೆರಳುವ ಮಾರ್ಗವನ್ನು ಅರಣ್ಯ ಇಲಾಖೆ ಬಂದ್ ಮಾಡಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಸುಪ್ರಸಿದ್ಧ ಪ್ರವಾಸಿತಾಣಕ್ಕೆ ಚಾರಣಿಗರ ಭೇಟಿಗೆ ನಿರ್ಬಂಧ; ಕಾರಣ?

ಶಿವಮೊಗ್ಗ: ಅಬ್ಬಿಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನೋರ್ವ ನೀರುಪಾಲಾಗಿರುವ ಘಟನೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಬಳಿ ನಡೆದಿದೆ. ವಿನೋದ್ ರಾಜ್ (26) ನೀರುಪಾಲಾದ ಪ್ರವಾಸಿಗ.

ಭಾನುವಾರ ಬೆಂಗಳೂರಿನಿಂದ 12 ಜನ ಸಾಫ್ಟ್​ವೇರ್​ ಇಂಜಿನಿಯರ್​ಗಳ ತಂಡ ಅಬ್ಬಿಫಾಲ್ಸ್ ವೀಕ್ಷಣೆಗೆ ಆಗಮಿಸಿತ್ತು. ಈ ವೇಳೆ ವಿನೋದ್ ರಾಜ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲುಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾರೆ. ವಿನೋದ್ ರಾಜ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂಲತಃ ಬಳ್ಳಾರಿ ಜಿಲ್ಲೆಯವರು ಎಂದ ತಿಳಿದು ಬಂದಿದೆ. ವಿನೋದ್ ರಾಜ್ ಪತ್ತೆಗೆ ಹೊಸನಗರ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫಾಲ್ಸ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಫಾಲ್ಸ್​ಗೆ ತೆರಳುವ ಮಾರ್ಗವನ್ನು ಅರಣ್ಯ ಇಲಾಖೆ ಬಂದ್ ಮಾಡಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಸುಪ್ರಸಿದ್ಧ ಪ್ರವಾಸಿತಾಣಕ್ಕೆ ಚಾರಣಿಗರ ಭೇಟಿಗೆ ನಿರ್ಬಂಧ; ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.