ETV Bharat / snippets

ಕಾರವಾರ: 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ
18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ (ETV Bharat)
author img

By ETV Bharat Karnataka Team

Published : Oct 26, 2024, 2:25 PM IST

ಕಾರವಾರ: ತಾಲೂಕಿನ ಮುಡಿಗೇರೆಯಲ್ಲಿ ಅಲ್ಯುಮಿನಿಯಮ್ ವಿದ್ಯುತ್ ತಂತಿ ಕಳ್ಳತನ‌ ಎಸಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನನ್ನು 18 ವರ್ಷದ ಬಳಿಕ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಭರ್ಮಯ್ಯ ಬಂಧನಕ್ಕೊಳಗಾದ ಆರೋಪಿ. ಈತ 2005ರಲ್ಲಿ ಪೊಲೀಸರ ವಶವಾಗಿದ್ದರೂ ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರಬಂದು ನಂತರ ತಲೆಮರೆಸಿಕೊಂಡಿದ್ದನು. ಈತನಿಗೆ ವಾರಂಟ್​ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಸಿಕೊಂಡು ತಿರುಗಾಡುತಿದ್ದ. ಇದೀಗ 18 ವರ್ಷದ ಬಳಿಕ ಚಿತ್ತಾಕುಲ ಠಾಣೆ ಪಿಎಸ್​ಐ ಮಹಾಂತೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗೋಣಿಬಸಪ್ಪ, ಗಣೇಶ್​ ನಾಯರ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾರವಾರ: ತಾಲೂಕಿನ ಮುಡಿಗೇರೆಯಲ್ಲಿ ಅಲ್ಯುಮಿನಿಯಮ್ ವಿದ್ಯುತ್ ತಂತಿ ಕಳ್ಳತನ‌ ಎಸಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನನ್ನು 18 ವರ್ಷದ ಬಳಿಕ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಭರ್ಮಯ್ಯ ಬಂಧನಕ್ಕೊಳಗಾದ ಆರೋಪಿ. ಈತ 2005ರಲ್ಲಿ ಪೊಲೀಸರ ವಶವಾಗಿದ್ದರೂ ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರಬಂದು ನಂತರ ತಲೆಮರೆಸಿಕೊಂಡಿದ್ದನು. ಈತನಿಗೆ ವಾರಂಟ್​ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಸಿಕೊಂಡು ತಿರುಗಾಡುತಿದ್ದ. ಇದೀಗ 18 ವರ್ಷದ ಬಳಿಕ ಚಿತ್ತಾಕುಲ ಠಾಣೆ ಪಿಎಸ್​ಐ ಮಹಾಂತೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗೋಣಿಬಸಪ್ಪ, ಗಣೇಶ್​ ನಾಯರ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸೈಬರ್ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.